ರಾಷ್ಟ್ರೀಯ

ತನ್ನದೇ ಶ್ರದ್ಧಾಂಜಲಿ ಜಾಹೀರಾತು ಪತ್ರಿಕೆಗಳಿಗೆ ನೀಡಿದ ಕ್ಯಾನ್ಸರ್ ರೋಗಿ! ಕಾರಣ ?

Pinterest LinkedIn Tumblr

ಕಣ್ಣೂರು: ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬ ಮಲಯಾಳಂ ಪತ್ರಿಕೆಗಳಿಗೆ ತನ್ನದೇ ಶ್ರದ್ಧಾಂಜಲಿ ಜಾಹೀರಾತು ನೀಡಿ ಪೊಲೀಸರ ಅತಿಥಿಯಾದ ವಿಲಕ್ಷಣ ಸುದ್ದಿ ಗಮನ ಸೆಳೆದಿದೆ.

ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಜೋಸೆಫ್ ಮೇಲ್​ಕುನ್ನಿಲ್(75) ಬಂಧಿತ ವ್ಯಕ್ತಿ. ನ.29ರಂದು ಪ್ರಮುಖ ಮಲೆಯಾಳಂ ದಿನಪತ್ರಿಕೆಗಳ ಕಚೇರಿಗೆ ತೆರಳಿದ ಜೋಸೆಫ್, ತನ್ನದೇ ಹಳೇ ಫೋಟೋ ಕೊಟ್ಟು ಸಹೋದರನದ್ದೆಂದು ನಂಬಿಸಿ ಶ್ರದ್ಧಾಂಜಲಿ ಜಾಹೀರಾತು ನೀಡಿದ್ದಾರೆ.

ಆದರಾಂಜಲಿಕ್ಕಳ್ ಎಂಬ ಶೀರ್ಷಿಕೆಯಡಿ, ತಿರುವನಂತಪುರಂನ ಪ್ರಾದೇಶಿಕ ಕ್ಯಾನ್ಸರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೋಸೆಫ್ ನಿಧನರಾಗಿದ್ದು ಡಿ.1ರಂದು ತಿರುವನಂತಪುರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂಬ ಒಕ್ಕಣೆ ಇತ್ತು. ಇದನ್ನು ನೋಡಿ ಕಂಗಾಲಾದ ಕುಟುಂಬಸ್ಥರು, ತಳಿಪರಂಬ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು.

ಏತನ್ಮಧ್ಯೆ, ಕೊಟ್ಟಾಯಂ ತಲುಪಿದ್ದ ಜೋಸೆಫ್ ಸ್ಥಳೀಯ ಬ್ಯಾಂಕ್​ಗೆ ತೆರಳಿ, ಪತ್ನಿ ಖಾತೆಗೆ ಹಣ ಮತ್ತು ಚಿನ್ನಾಭರಣ ವರ್ಗಾಯಿಸುವ ಬಗ್ಗೆ ವಿಚಾರಿಸಿದ್ದಾರೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಾಸಗಿ ಹೋಟೆಲ್​ನಲ್ಲಿ ಮಂಗಳವಾರ ಆತನನ್ನು ಬಂಧಿಸಿದ ಪೊಲೀಸರು, ವಿಚಾರಣೆ ಆರಂಭಿಸಿದ್ದಾರೆ.

Comments are closed.