ರಾಷ್ಟ್ರೀಯ

ವಿವಾದ ಬಗೆಹರಿಸಲು ರವಿಶಂಕರ್‌ ಯಾರು?: ಬಿಜೆಪಿ ಮಾಜಿ ಸಂಸದ

Pinterest LinkedIn Tumblr


ಲಖನೌ: ಅಯೋಧ್ಯೆ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವ ಆರ್ಟ್‌ ಆಫ್‌ ಲಿವಿಂಗ್‌ ನ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್‌ ವಿರುದ್ಧ ಬಿಜೆಪಿಯ ಮಾಜಿ ಸಂಸದ ರಾಮ್‌ ವಿಲಾಸ್‌ ವೇದಾಂತಿ ಕಿಡಿಕಾರಿದ್ದು, ಈ ವಿವಾದದ ಮಧ್ಯಸ್ಥಿಕೆ ವಹಿಸಲು ಶ್ರೀಶ್ರೀ ರವಿಶಂಕರ್ ಯಾರು? ಎಂದು ಪ್ರಶ್ನಿಸಿದ್ದಾರೆ.
ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಮಾತುಕತೆಗಳನ್ನು ನಡೆಸುವುದಾಗಿ ಶ್ರೀ ಶ್ರೀ ರವಿಶಂಕರ್ ಅವರು ಘೋಷಿಸಿದ ಬೆನ್ನಲ್ಲೇ ಇವರ ವಿರುದ್ಧ ಕಿಡಿಕಾರಿರುವ ವೇದಾಂತಿ, ತಮ್ಮ ಅಪಾರವಾದ ಆಸ್ತಿ ತನಿಖೆಯಿಂದ ಬಚಾವಾಗುವ ಉದ್ದೇಶದಿಂದ ರವಿಶಂಕರ್ ಅಯೋಧ್ಯೆ ವಿವಾದ ಬಿಕ್ಕಟ್ಟಿಗೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

‘ ಸೌಜನ್ಯದಿಂದ ಮಾತ್ರ ರವಿಶಂಕರ್‌ ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ. ಆದರೆ ಅಯೋಧ್ಯ ವಿಚಾರವಾಗಿ ಯಾರನ್ನು ಭೇಟಿಯಾಗುತ್ತಿದ್ದಾರೆ, ಯಾರೊಂದಿಗೆ ಮಾತುಕತೆ ನಡೆಸುತ್ತಾರೆ ಎಂಬುದರ ಕುರಿತು ನನಗೇನೂ ತಿಳಿದಿಲ್ಲ. ಅವರ ಸೆಟ್ಲ್‌ಮೆಂಟ್‌ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಈ ರೀತಿಯ ಮಾತುಕತೆಯಿಂದ ವಿವಾದಕ್ಕೆ ಪರಿಹಾರ ಸಿಗಬಹುದೇ ಎಂಬುದಕ್ಕೂ ಉತ್ತರವಿಲ್ಲ. ಆದರೆ ನಾವಂತೂ ಎಂತಹ ಸಂದರ್ಭ ಬಂದರೂ ರಾಮ ಮಂದಿರ ನಿರ್ಮಿಸುವುದು ಸತ್ಯ’ ಎಂದು ಹೇಳಿದ್ದಾರೆ.

Comments are closed.