ಜಮ್ಮು : ಜಮ್ಮು ಕಾಶ್ಮೀರದ ತಮ್ಮ ಮೂರು ದಿನಗಳ ಭೇಟಿಯ ವೇಳೆ ವಿಶ್ವ ಹಿಂದು ಪರಿಷತ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅವರು ನ.3ರಂದು ರಾಜ್ಯದಲ್ಲಿನ ಹಿಂದು ಸಮುದಾಯದ ಸದಸ್ಯರಿಗಾಗಿ ಸಹಾಯವಾಣಿಯನ್ನು ಆರಂಭಿಸಲಿದ್ದಾರೆ.
ಯಾತ್ರೆ, ಪ್ರವಾಸ, ರಜೆಯಲ್ಲಿರುವ, ಅಪಘಾತವೇ ಮೊದಲಾದ ತುರ್ತು ಪರಿಸ್ಥಿತಿಗಳಿಗೆ ಹಾಗೂ ಇನ್ನಿತರ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿಕೊಳ್ಳುವ ಭಾರತೀಯ ಸಮುದಾಯದ ಸದಸ್ಯರಿಗೆ ನೆರವಾಗುವುದು ಈ ಸಹಾಯವಾಣಿಯ ಉದ್ದೇಶವಾಗಿರುತ್ತದೆ ಎಂದು ಸಂಘಟನೆಯ ನಾಯಕರೋರ್ವರು ಹೇಳಿದ್ದಾರೆ.
ತೊಗಾಡಿಯ ಅವರು ಹೈಲ್ಪ್ ಲೈನ್ನ ಪ್ರಮುಖ ಸದಸ್ಯರ ರಾಷ್ಟ್ರ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಾರೆ ಎಂದು ತನ್ನ ಹೆಸರು ತಿಳಿಸಬಯಸದ ನಾಯಕ ಹೇಳಿದ್ದಾರೆ.
-ಉದಯವಾಣಿ
Comments are closed.