ರಾಷ್ಟ್ರೀಯ

ವದಂತಿ ನಂಬಿ ಸಾಮೂಹಿಕ ರಜೆ ಹಾಕಿದ ಪೊಲೀಸರು!

Pinterest LinkedIn Tumblr

ಜೈಪುರ: ರಾಜಸ್ಥಾನದ ಜೋಧಪುರಕ್ಕೆ ಗೃಹ ಸಚಿವ ರಾಜನಾಥ್‌ ಸಿಂಗ್‌ ಭೇಟಿ ವೇಳೆ 250ಕ್ಕೂ ಹೆಚ್ಚು ಪೊಲೀಸರು ಸಾಮೂಹಿಕ ರಜೆ ಮೇಲೆ ತೆರಳಿದ ಅಚ್ಚರಿಯ ಪ್ರಸಂಗ ನಡೆದಿದೆ. ಸದ್ಯ 29 ಸಾವಿರ ರೂ. ಇರುವ ವೇತನವನ್ನು 19 ಸಾವಿರಕ್ಕೆ ಕಡಿತಗೊಳಿಸಲಾಗುತ್ತದೆ ಎಂದು ವಾಟ್ಸ್‌ಆ್ಯಪ್‌ ನಲ್ಲಿ ಬಂದ ವದಂತಿ ನಂಬಿ ಪೊಲೀಸರು ಈ ಎಡವಟ್ಟು ಮಾಡಿಕೊಂಡಿದ್ದಾರೆ.

ಗುಪ್ತಚರ ದಳದ ಪ್ರಾದೇಶಿಕ ತರಬೇತಿ ಕೇಂದ್ರ ಉದ್ಘಾಟಿಸಲು ರಾಜನಾಥ್‌ ತೆರಳಿದ್ದರು. ಅವರಿಗೆ ಗೌರವ ವಂದನೆ ಸಲ್ಲಿಸಬೇಕಿದ್ದ ಕೆಲ ಪೊಲೀಸರೂ ದಿಢೀರನೆ ರಜೆ ಹಾಕಿದ್ದು, ಕೊನೇ ಕ್ಷಣದಲ್ಲಿ ಬೇರೆ ಪೊಲೀಸರನ್ನು ಈ ಕಾರ್ಯಕ್ಕೆ ನಿಯೋಜಿಸಲಾಯಿತು. ಇದೀಗ ರಜೆ ಹಾಕಿದವರ
ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.

-ಉದಯವಾಣಿ

Comments are closed.