ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಪುತ್ರಿಯ ವಿವಾಹಕ್ಕೆ ಆಗಮಿಸುವ ಗಣ್ಯರಿಗಾಗಿ 50 ವಿಮಾನಗಳಲ್ಲಿ ಟಿಕೆಟ್ ಕಾಯ್ದಿರಿಸಲಾಗಿದೆ.
ಈ ಕಾರಣದಿಂದಾಗಿ ಡಿಸೆಂಬರ್ 3 ಮತ್ತು 4ನೇ ತಾರೀಖಿಗೆ ನಾಗ್ಪುರಕ್ಕೆ ಹೋಗುವ ಯಾವುದೇ ವಿಮಾನಗಳಲ್ಲಿ ಇತರ ಪ್ರಯಾಣಿಕರಿಗೆ ಸೀಟು ಸಿಗಲಿಲ್ಲ.
ಗಡ್ಕರಿ ಅವರ ಪುತ್ರಿ ಕೇತ್ಕಿ ಅವರ ವಿವಾಹವು ನಾಗ್ಪುರದಲ್ಲಿ ಇಂದು ಸಂಜೆ (ರವಿವಾರ) ನಡೆಯಲಿದ್ದು, ಈ ವಿವಾಹಕ್ಕೆ 10,000ಕ್ಕಿಂತಲೂ ಹೆಚ್ಚು ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಉದ್ಯಮಿಗಳಾದ ಮುಕೇಶ್ ಅಂಬಾನಿ, ರತನ್ ಟಾಟಾ ಸೇರಿದಂತೆ ಕೇಂದ್ರ ಸಚಿವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವಿವಾಹ ಆಮಂತ್ರಣ ನೀಡಲಾಗಿದೆ.
ನಾಗ್ಪುರದ ವಾದ್ರಾ ರಸ್ತೆಯಲ್ಲಿರುವ ‘ರಾಣಿ ಕೋಟಿ’ಯಲ್ಲಿ ಅದ್ದೂರಿ ವಿವಾಹ ನೆರವೇರಲಿದೆ.
ಗಡ್ಕರಿಯ ಕಿರಿಯ ಪುತ್ರಿ ಕೇತ್ಕಿ ನಾಗ್ಪುರದ ಆದಿತ್ಯ ಎಂಬವರನ್ನು ವಿವಾಹವಾಗಲಿದ್ದಾರೆ. ವರ ಅಮೆರಿಕದಲ್ಲಿ ಫೇಸ್ಬುಕ್ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.
Comments are closed.