ರಾಷ್ಟ್ರೀಯ

ಕೇರಳದ ಮದ್ಯದ ಉದ್ಯಮಿ ಡಾ.ಬಿಜು ರಮೇಶ್‌ ಪುತ್ರಿ ಮದುವೆಗಾಗಿ ತಲೆ ಎತ್ತಿದ ಮೈಸೂರು ಅರಮನೆ, ಅಕ್ಷರಧಾಮ ಮಂದಿರ!

Pinterest LinkedIn Tumblr

mamama-finalತಿರುವನಂತಪುರ: ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಮೈಸೂರು ಅರಮನೆ ಮತ್ತು ಅಕ್ಷರಧಾಮ ಮಂದಿರ ತಲೆ ಎತ್ತಿವೆ!

ಕೇರಳದ ಮದ್ಯದ ಉದ್ಯಮಿ, ರಾಜಕಾರಣಿ ಡಾ. ಬಿಜು ರಮೇಶ್‌ ಮಗಳು ಮೇಘಾ ಮದುವೆಗಾಗಿ ತಿರುವನಂತಪುರದ ರಾಜಧಾನಿ ಗಾರ್ಡನ್ಸ್‌ನಲ್ಲಿ ಮೈಸೂರು ಅರಮನೆ ಮತ್ತು ಅಕ್ಷರಧಾಮ ಮಂದಿರ ಮಾದರಿಯ ಅದ್ದೂರಿ ಸೆಟ್‌ ಹಾಕಲಾಗಿದೆ.

ಕೇರಳದ ಮಾಜಿ ಸಚಿವ ಆಡೂರು ಪ್ರಕಾಶ್‌ ಪುತ್ರ ಅಜಯ್‌ ಕೃಷ್ಣನ್‌ ಮತ್ತು ಮೇಘಾ ಅವರ ಮದುವೆ ಭಾನುವಾರ ನಡೆಯುಲಿದೆ. ಜನಾರ್ದನ ರೆಡ್ಡಿ ಮಗಳ ಮದುವೆಯ ಬಳಿಕ ಕೇರಳದಲ್ಲಿ ಈ ಅದ್ದೂರಿ ಮದುವೆ ನಡೆಯುತ್ತಿದೆ.

ಸೆಟ್‌ನ ಪ್ರವೇಶ ದ್ವಾರವನ್ನು ಮೈಸೂರು ಅರಮನೆಯ ಮಾದರಿಯಲ್ಲಿ ನಿರ್ಮಿಸಲಾಗಿದೆ. ಮದುವೆ ಮಂಟಪವನ್ನು ದೆಹಲಿಯ ಅಕ್ಷರಧಾಮ ಮಂದಿರದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಭಾನುವಾರ ನಡೆಯುವ ಬಿಜು ಮಗಳ ಮದುವೆಗೆ 20 ಸಾವಿರಕ್ಕೂ ಹೆಚ್ಚು ಅತಿಥಿಗಳು ಬರುವ ನಿರೀಕ್ಷೆ ಇದೆ.

Comments are closed.