ಪಾಟ್ನಾ: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ನನ್ನು ಕರೆದುಕೊಂಡು ಹೋಗಿ ಸಹೋದರಿಯನ್ನು ಕೊಟ್ಟು ವಿವಾಹ ಮಾಡಲಿ ಎಂದು ಆರ್ಜೆಡಿ ನಾಯಕಿ, ಮಾಜಿ ಸಿಎಂ ರಾಬ್ಡಿದೇವಿ, ಸುಶೀಲ್ ಮೋದಿಗೆ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಸಿದೆ.
ಆರ್ಜೆಡಿ, ಕಾಂಗ್ರೆಸ್ ಬದಲಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಆಹ್ವಾನ ಕುರಿತಂತೆ ಸುದ್ದಿಗಾರರು ರಾಬ್ಡಿದೇವಿಯವರನ್ನು ಪ್ರಶ್ನಿಸಿದಾಗ, ನಿತೀಶ್ ಕುಮಾರ್ರನ್ನು ಮೋದಿ ಕರೆದುಕೊಂಡು ಹೋಗಿ ತಮ್ಮ ಸಹೋದರಿಯೊಂದಿಗೆ ವಿವಾಹ ಮಾಡಲಿ ಎಂದು ವ್ಯಂಗ್ಯವಾಡಿದರು.
ನಂತರ ತಮ್ಮ ಹೇಳಿಕೆಯ ಗಂಭೀರತೆಯನ್ನು ಅರಿತ ರಾಬ್ಡಿದೇವಿ, ನಾನು ಸುಮ್ನೆ ಜೋಕ್ ಮಾಡುತ್ತಿದ್ದೆ. ನನ್ನ ಹೇಳಿಕೆಗೆ ಮಹತ್ವ ನೀಡುವುದು ಬೇಡ ಎಂದು ಕೋರಿದರು.
ಇದಕ್ಕಿಂತ ಮೊದಲು ಸುಶೀಲ್ ಕುಮಾರ್ ಹೇಳಿಕೆ ನೀಡಿ, ಆರ್ಜೆಡಿ ಮತ್ತು ಕಾಂಗ್ರೆಸ್ನೊಂದಿಗೆ ನಿತೀಶ್ ಮೈತ್ರಿ ಮುಂದುವರಿಸಿದಲ್ಲಿ ರಾಜಕೀಯ ಜೀವನ ಅಂತ್ಯವಾಗುವುದು ಖಚಿತ. ಆದ್ದರಿಂದ ಬಿಜೆಪಿ ಪಕ್ಷಕ್ಕೆ ಬೆಂಬಲಿಸಲಿ ಎಂದು ಆಹ್ವಾನ ನೀಡಿದ್ದರು.
ಕಳೆದ 17 ವರ್ಷಗಳಿಂದ ನಿತೀಶ್ ಬಿಜೆಪಿಯಲ್ಲಿದ್ದರು ಅವರ ರಾಜಕೀಯ ಜೀವನ ಅಂತ್ಯವಾಗಿಲ್ಲ. ಬದಲಿಗೆ ಮತ್ತಷ್ಟು ಇವರ ಇಮೇಜ್ ಹೆಚ್ಚಾಗಲು ಸಹಕಾರಿಯಾಯಿತು ಎಂದರು.
ನನ್ನ ರಾಜಕೀಯ ಜೀವನ ಅಂತ್ಯಗೊಳಿಸಲು ಹುನ್ನಾರ ನಡೆಯುತ್ತಿದೆ ಎಂದು ಬಿಹಾರ್ ಸಿಎಂ ನಿತೀಶ್ ಕುಮಾರ್ ಹೇಳಿಕೆ ನೀಡಿದ ಮಾರನೇ ದಿನವೇ ಬಿಜೆಪಿ ಮುಖಂಡ ಸುಶೀಲ್ ಮೋದಿ ಹೇಳಿಕೆ ಹೊರಬಿದ್ದಿದೆ.
ಗಮನಾರ್ಹ ವಿಷಯವೆಂದರೆ, ಮಿತ್ರಪಕ್ಷಗಳ ವಿರೋಧಧ ಮಧ್ಯೆಯೂ ನಿತೀಶ್ ಕುಮಾರ್, ಕೇಂದ್ರ ಸರಕಾರದ ನೋಟು ನಿಷೇಧವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.
Comments are closed.