ಮುಜಾಫರ್ ನಗರ್: ಮೂಲಂಗಿ ಕದ್ದಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಗುಂಡಿನ ದಾಳಿ ನಡೆಸಿ, ಆತನ ಕುಟುಂಬಸ್ಥರಿಗೆ ಥಳಿಸಿರುವ ಘಟನೆ ಮುಜಾಫರ್ ನಗರದಲ್ಲಿ ನಡೆದಿದೆ.
ಸ್ಥಳೀಯ ಗ್ರಾಮ್ ಪ್ರಧಾನ್ ಅವರ ತೋಟದಿಂದ ಮೂಲಂಗಿ ಕದ್ದಿದ್ದಾರೆಂದು ಆರೋಪಿಸಿ, ಅನಿಲ್, ಆತನ ಪುತ್ರ ಹಾಗೂ ಅಳಿಯ ಸರೋತ್ತಮ್ ಮತ್ತು ನಿಶಾಂತ್ ಎಂಬುವರು ಸುನೀಲ್ ಕುಮಾರ್ ಎಂಬಾತನ ಮನೆಗೆ ಬಂದು ಬೈಯ್ದಿದ್ದಾರೆ. ಆದರೆ ಸುನೀಲ್ ಕುಮಾರ್ ಈ ಆರೋಪವನ್ನು ನಿರಾಕರಿಸಿದ್ದಾನೆ. ಈ ವೇಳೆ ಆರೋಪಿ ಸುನೀಲ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾನೆ.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ, ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ.
ರಾಷ್ಟ್ರೀಯ
Comments are closed.