ರಾಷ್ಟ್ರೀಯ

ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ಒಳಗೊಂಡಂತೆ 20 ವಿದ್ಯಾರ್ಥಿಗಳಿಗೆ ನೋಟಿಸ್​

Pinterest LinkedIn Tumblr

kannayyaನವದೆಹಲಿ (ನ.26): ದೇಶದ್ರೋಹ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಕನ್ಹಯ್ಯ ಕುಮಾರ್ ಸೇರಿದಂತೆ 20 ಜೆಎನ್ ಯು’ನ ವಿದ್ಯಾರ್ಥಿಗಳಿಗೆ ವಿವಿ ಆಡಳಿತ ಮಂಡಳಿ ನೋಟಿಸ್ ನೀಡಿದೆ.
ವಿವಿ ಉಪಕುಲಪತಿ ಹಾಗೂ ಇತರೆ ಹಿರಿಯ ಅಧಿಕಾರಿಗಳನ್ನು ಆಡಳಿತ ಕಚೇರಿಯ ಕಟ್ಟಡದಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿದ ಸಂಬಂಧ ವಿವರಣೆ ನೀಡುವಂತೆ ಜೆಎನ್ ಯು ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ನಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ಒಳಗೊಂಡಂತೆ 20 ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ.
ಬಯೋಟೆಕ್ನಾಲಜಿ ವಿದ್ಯಾರ್ಥಿ ನಜೀಬ್ ಅಹಮದ್ ಕಳೆದ ಅಕ್ಟೋಬರ್ 15 ರಿಂದ ನಾಪತ್ತೆಯಾಗಿದ್ದ ಹಿನ್ನಲೆಯಲ್ಲಿ ಕನ್ಹಯ್ಯ ನೇತೃತ್ವದಲ್ಲಿ ವಿವಿಯ ಆಡಳಿತ ಕಚೇರಿಯಲ್ಲಿ ಸುಮಾರು 20 ಗಂಟೆಗಳ ಕಾಲ ಉಪಕುಲಪತಿ ಮತ್ತಿತರರನ್ನು ಬಂಧಿಸಿಡಲಾಗಿತ್ತು, ಈ ಸಂಬಂಧ 20 ವಿದ್ಯಾರ್ಥಿಗಳಿಗೂ ವಿವಿ ಆಡಳಿತ ಮಂಡಳಿ ನೋಟಿಸ್ ಜಾರಿ ಮಾಡಿದೆ.

Comments are closed.