ರಾಷ್ಟ್ರೀಯ

ಛತ್ತೀಸ್ ಗಢ: ಎನ್ ಕೌಂಟರ್ ನಲ್ಲಿ ಐವರು ನಕ್ಸಲರ ಹತ್ಯೆ

Pinterest LinkedIn Tumblr

1-Naxalನಾರಾಯಣ್ ಪುರ(ಚತ್ತೀಸ್ ಗಢ): ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯ ಬೆಚ ಅರಣ್ಯ ಪ್ರದೇಶದಲ್ಲಿ ಕಳೆದ ರಾತ್ರಿ ಪೊಲೀಸ್ ಎನ್ ಕೌಂಟರ್ ನಲ್ಲಿ ಕನಿಷ್ಠ ಐವರು ನಕ್ಸಲೀಯರು ಹತರಾಗಿದ್ದಾರೆ. ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಯಶಸ್ವಿ ಕಾರ್ಯಾಚರಣೆಯಲ್ಲಿ ತುಸ್ಪಾಲ್ ಮತ್ತು ಬೆಚ ಕಿಲಮ್ ಅರಣ್ಯ ಪ್ರದೇಶದಲ್ಲಿ ನಾರಾಯಣಪುರ ಜಿಲ್ಲಾ ಮೀಸಲು ಗುಂಪಿನ ಸಿಪಿಐ ಮಾವೋವಾದಿಗಳ ನಂಬರ್ 6, ಮಿಲಿಟರಿ ಕಂಪೆನಿಯ 6 ಮಂದಿ ಮಾವೋವಾದಿಗಳನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದುಹಾಕಿದ್ದಾರೆ. ಇದುವರೆಗೆ ಐವರು ನಕ್ಸಲೀಯರ ಶವ ದೊರೆತಿದ್ದು ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾರಾಯಣ್ ಪುರ ಪೊಲೀಸರು ಮತ್ತು ಕೊಂಡಗೌನ್ ಪೊಲೀಸರ ತಂಡ ಜಂಟಿಯಾಗಿ ಕರ್ಯಾಚರಣೆ ನಡೆಸಿದೆ. ಮಿಷನ್ 2016 ಬಾಸ್ತಾರ್ ನ ಭಾಗವಾಗಿ ಈ ಎನ್ ಕೌಂಟರ್ ನಡೆದಿದೆ.

Comments are closed.