ರಾಷ್ಟ್ರೀಯ

ನೋಟು ನಿಷೇಧ ವಿರೋಧಿಸಿ ಮಮತಾ ಪಾದಯಾತ್ರೆ

Pinterest LinkedIn Tumblr

mamataನವದೆಹಲಿ (ನ.16): ನೋಟು ನಿಷೇಧವನ್ನು ಖಂಡಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ 44 ಶಾಸಕರೊಂದಿಗೆ ಸಂಸತ್ ನಿಂದ ರಾಷ್ಟ್ರಪತಿಭವನದವರೆಗೆ ಪಾದಯಾತ್ರೆ ನಡೆಸಿದರು.
ನೋಟು ನಿಷೇಧವನ್ನು ವಿರೋಧಿಸಿ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಟಿಎಂಸಿ ನಾಯಕರು ರಾಷ್ಟ್ರಪತಿ ಭವನದೆದುರು ಘೋಷಣೆ ಕೂಗಿದರು. ಹಣದ ಅಪಮೌಲ್ಯೀಕರಣವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
“ ಇದನ್ನು ಬಹಳ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಕಪ್ಪುಹಣವನ್ನು ಹೊರತರಲು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ತಡೆ ಹಿಡಿಯಬೇಕು” ಎಂದು ಟಿಎಂಸಿ ವಕ್ತಾರ ಸುದೀಪ್ ಬಂಡೋಪಾಧ್ಯಾಯ ಮಾಧ್ಯಮಕ್ಕೆ ತಿಳಿಸಿದರು.

Comments are closed.