ಚೆನ್ನೈ: ‘ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದೆ. ಪೂರ್ಣ ಗುಣಮುಖ ಆಗಿರುವುದಾಗಿ ಅವರಿಗೆ ಅನಿಸಿದರೆ ಅವರು ಮನೆಗೆ ಹೋಗಬಹುದು’ ಎಂದು ಚೆನ್ನೈನ ಅಪೋಲೊ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ತಿಳಿಸಿದ್ದಾರೆ.
ಸೆಪ್ಟೆಂಬರ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಈವರೆಗೆ ಆಸ್ಪತ್ರೆಯಲ್ಲೇ ಇದ್ದಾರೆ.
ಜಯಲಲಿತಾ ಸಂಪೂರ್ಣ ಗುಣಮುಖರಾಗಿದ್ದರೂ ಅವರು ಇನ್ನೂ ಕೆಲ ಕಾಲ ಆಸ್ಪತ್ರೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಎಐಎಡಿಎಂಕೆ ಪಕ್ಷದ ಮುಖಂಡರು ಹೇಳಿದ್ದಾರೆ.
‘ಜಯಲಲಿತಾ ಅವರು ಮನೆಗೆ ಹೋದರೆ ಮನೆಯಲ್ಲಿ ಸುಮ್ಮನೇ ಕೂರುವವರಲ್ಲ. ಅದೂ ಇದೂ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಅದರಿಂದ ಅವರಿಗೆ ಆಯಾಸವಾಗಬಹುದು. ಹೀಗಾಗಿ ಅವರು ಇನ್ನೂ ಕೆಲ ಸಮಯ ಆಸ್ಪತ್ರೆಯಲ್ಲೇ ಇರಲಿ’ ಎಂದು ಎಐಎಡಿಎಂಕೆ ಪಕ್ಷದ ಹಿರಿಯ ಮುಖಂಡ ಪೊನ್ನಯ್ಯನ್ ತಿಳಿಸಿದ್ದಾರೆ.
Comments are closed.