ತಿರುವನಂತಪುರ(ನ.07): ಕೇರಳದ ಶಬರಿಮಲೆಯಲ್ಲಿರುವ ಪ್ರಸಿದ್ದ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣಕ್ಕೆ ಈ ಹಿಂದೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಅದರೆ, ಇದೀಗ ಪಿನ್ನರಾಯಿ ವಿಜಯನ್ ಸರ್ಕಾರವು ಮಹಿಳೆಯರ ಪ್ರವೇಶವನ್ನು ನಮ್ಮ ಸರ್ಕಾರ ವಿರೋಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್`ಗೆ ವಿವರಣೆಯನ್ನು ನೀಡಿದ್ದಾರೆ.
ಇದರಿಂದಾಗಿ 10 ರಿಂದ 50 ವರ್ಷದ ಮಹಿಳೆಯರ ದೇಗುಲ ನಿರ್ಬಂದಕ್ಕೆ ತೆರೆ ಬಿದ್ದಿದೆ. ಇದೇ 16ರಿಂದ ಮಂಡಲ ಉತ್ಸವಕ್ಕೆ ದೇಗುಲದ ಬಾಗಿಲು ತೆರೆಯಲಿದ್ದು ದೇಶದ ನಾನಾ ಭಾಗದಿಂದ ಭಕ್ತರು ಹರಿದು ಬರುವ ನಿರೀಕ್ಷೆ ಇದೆ.
ರಾಷ್ಟ್ರೀಯ
Comments are closed.