ಹಿಮಾಚಲ ಪ್ರದೇಶ: ಬ್ಯಾಸ್ ನದಿಗೆ ಬಸ್ ಉರುಳಿ 18 ಮಂದಿ ಮೃತಪಟ್ಟಿದ್ದು, 24 ಜನರು ಗಾಯಗೊಂಡಿದ್ದಾರೆ.
ಮಂಡಿ ಜಿಲ್ಲೆಯ ವಿಂದ್ರವಾಣಿ ಸಮೀಪ ಬ್ಯಾಸ್ ನದಿಗೆ ಖಾಸಗಿ ಬಸ್ ಉರುಳಿ, ಬಸ್ನಲ್ಲಿ ಪ್ರಯಾಣಿಸುತ್ತಿದ್ದ 40 ಪ್ರಯಾಣಿಕರ ಪೈಕಿ 18 ಮಂದಿ ಸಾವಿಗೀಡಾಗಿದ್ದಾರೆ.
ಹಿಮ ಪ್ರದೇಶ, ಪರ್ವತ ಶ್ರೇಣಿ, ಕಾಡು ಹಾಗೂ ನದಿಯಿಂದ ಆವೃತವಾಗಿರುವ ಮನಾಲಿ ವಲಯದಿಂದ ಹೊರಟ ಬಸ್ ಕುಲ್ಲು ಕಡೆಗೆ ಸಾಗುತ್ತಿತ್ತು. ಮಾರ್ಗ ಮಧ್ಯದಲ್ಲಿ ಬೈಕ್ ಸವಾರನನ್ನು ತಪ್ಪಿಸಲು ಪಕ್ಕಕ್ಕೆ ಸರಿದ ಬಸ್, ಬ್ಯಾಸ್ ನದಿಗೆ ಉರುಳಿದೆ. ಸ್ಥಳದಲ್ಲಿಯೇ 14 ಮಂದಿ ಮೃತರಾಗಿದ್ದು, ನಾಲ್ಕು ಮಂದಿ ಮಂಡಿ ಜಿಲ್ಲೆಯ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕರು ಮಂಡಿ ಮತ್ತು ಕುಲ್ಲು ಪ್ರಾಂತ್ಯಗಳಿಗೆ ಸೇರಿದವರಾಗಿದ್ದಾರೆ.
Comments are closed.