ರಾಷ್ಟ್ರೀಯ

ಪಾಕ್‌ಗೆ ಬುದ್ಧಿ ಹೇಳಿ, ಕೇಳದಿದ್ದರೆ ಸರ್ವನಾಶ ಮಾಡಿ

Pinterest LinkedIn Tumblr

mandeep-singhಹರಿಯಾಣ: ಪಾಕಿಸ್ತಾನಕ್ಕೆ ಬುದ್ದಿ ಹೇಳಿ, ಬುದ್ಧಿ ಮಾತು ಕೇಳದಿದ್ದರೆ ಪಾಕಿಸ್ತಾನವನ್ನು ಸರ್ವನಾಶ ಮಾಡಿಬಿಡಿ. ಕನಿಷ್ಠ ಪಕ್ಷ ಪ್ರತಿದಿನ ಕಪ್ಪು ದೀಪಾವಳಿ ಆಗುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದ ಅವರಿಗೆ ಹುತಾತ್ಮ ಯೋಧ ಮನ್ ದೀಪ್ ಸಿಂಗ್ ಪತ್ನಿ ಮನವಿ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಗಡಿಯಲ್ಲಿ ಈಗಾಗಲೇ ನಮ್ಮ 7 ಮಂದಿ ಯೋಧರು ಹುತಾತ್ಮರಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಹುತಾತ್ಮ ಯೋಧ 27 ವರ್ಷದ ಮನ್ ದೀಪ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಹರಿಯಾಣದ ಕುರುಕ್ಷೇತ್ರಕ್ಕೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಸುದ್ದಿ ಸಂಸ್ಧೆಯೊಂದಿಗೆ ಮಾತನಾಡಿದ ಯೋಧನ ಪತ್ನಿ ಈ ಆಕ್ರೋಶದ ನುಡಿಗಳನ್ನು ವ್ಯಕ್ತಪಡಿಸಿದ್ದಾರೆ.
ದೇಶಕ್ಕಾಗಿ ಪ್ರಾಣ ನೀಡಿರುವ ಹುತಾತ್ಮ ಯೋಧರಿಗೆ ನನ್ನ ನಮನಗಳು. ತಮ್ಮ ದೇಶ ರಕ್ಷಣೆಗಾಗಿ ಪ್ರಾಣವನ್ನು ಅರ್ಪಿಸಿದ್ದಾರೆ. ಎಲ್ಲಾ ಯೋಧರಿಗೂ ನನ್ನ ಸಲಾಂ, ನನ್ನ ಪತಿ ಕೂಡಾ ಧೈರ್ಯಶಾಲಿ ಎಂದು ಮನ್ ದೀಪ್ ಸಿಂಗ್ ಪತ್ನಿ ಹೇಳಿದ್ದಾರೆ.

Comments are closed.