ನವದೆಹಲಿ: ಫೋನಿನಲ್ಲಿ ಪರ ಪುರುಷನ ಜತೆ ಆತ್ಮೀಯವಾಗಿ ಮಾತನಾಡಿದ ಪತ್ನಿಯನ್ನು 60 ವರ್ಷದ ಪತಿ ಚೂರಿಯಿಂದ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಪಶ್ಚಿಮ ದೆಹಲಿಯ ಹರಿ ನಗರ್ ನಲ್ಲಿ ದಂಪತಿಗಳು ವಾಸವಾಗಿದ್ದು, ಆನಂದ್ ನಿಕೇತನ್ ಪ್ರದೇಶದಲ್ಲಿ 58 ವರ್ಷದ ಮೃತ ಮಂಜು ಮೋಂಗಾ ಅವರು ಬಾಟಿಕ್ ಶಾಪ್ ನಡೆಸುತ್ತಿದ್ದರು. ಮನೆಯ ನಿರ್ವಹಣೆಯನ್ನು ಮಂಜು ಮೋಂಗಾ ಅವರೇ ನೋಡಿಕೊಳ್ಳುತ್ತಿದ್ದರು. ಪತಿ ಮೋಂಗಾ ಸಹೋದರಿಯ ಸಂಗೀತ ಶಾಲೆಯಲ್ಲಿ ಗಿಟಾರ್ ಕಲಿಸುತ್ತಿದ್ದರು. ಆದಾಯ ಬೇರೆ ಕಡಿಮೆ ಇತ್ತು. ಬಂದ ಹಣವನ್ನೆಲ್ಲಾ ಕುಡಿದು ಮೋಂಗಾ ಕಳೆಯುತ್ತಿದ್ದರು.
ಬುಧವಾರ ದಿಢೀರ್ ಮನೆಗೆ ಬಂದ ಮೋಂಗಾ ಪತ್ನಿಯನ್ನು ಬಾಟಿಕ್ ಶಾಪ್ ಗೆ ಡ್ರಾಪ್ ಮಾಡುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆ ಮಂಜು ಮೋಂಗಾಗೆ ಕರೆ ಬಂದಿದ್ದು ಕರೆ ಮಾಡಿದವನ ಜತೆ ಆತ್ಮೀಯವಾಗಿ ಮಾತನಾಡಿದ್ದಾರೆ. ಬಳಿಕ ಕರೆ ಮಾಡಿದ್ದು ಯಾರು ಎಂದು ಪತ್ನಿಯನ್ನು ಮೋಂಗಾ ಕೇಳಿದ್ದು ಇದಕ್ಕೆ ಮಂಜು ಸರಿಯಾಗಿ ಉತ್ತರ ನೀಡದಿದ್ದಾಗ ವ್ಯಗ್ರಗೊಂಡು ಕಾರಿನಲ್ಲಿದ್ದ ಚೂರಿಯನ್ನು ತೆಗೆದು ಪತ್ನಿಯ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಪರಾರಿಯಾಗಲು ಯತ್ನಿಸಿದಾಗ ಪ್ರತ್ಯಕ್ಷದರ್ಶಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Comments are closed.