ಮಂಡಿ (ಹಿಮಾಚಲ ಪ್ರದೇಶ): ನಾವು ಇಸ್ರೇಲ್ ದೇಶದ ಸೇನೆಯ ಬಗ್ಗೆ ಮಾತನಾಡುವುದನ್ನು ಕೇಳಿದ್ದೇವೆ ಆದರೆ ಇಂದು ಇಡೀ ವಿಶ್ವವೇ ಭಾರತೀಯ ಸೇನೆಯ ಬಗ್ಗೆ ಮಾತಾಡುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿರುವ ಮೋದಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡುತ್ತಿದ್ದರು.
ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಸೀಮಿತ ದಾಳಿಯಿಂದ ನಮ್ಮ ಸೇನೆಯ ಬಗ್ಗೆ ಇಡೀ ವಿಶ್ವವೇ ಮಾತನಾಡುವಂತಾಗಿದೆ ಎಂದರು.
ಹಿಮಾಚಲ ಪ್ರದೇಶ ದೈವ ಭೂಮಿ, ವೀರಭೂಮಿಯಾಗಿದ್ದು ಭಾರತೀಯ ಸೇನೆಯಲ್ಲಿರುವ ಹೆಚ್ಚು ಯುವಕರು ಹಿಮಾಚಲ ಪ್ರದೇಶದವರು ಎಂದು ಅವರು ತಿಳಿಸಿದರು.
Comments are closed.