ನವದೆಹಲಿ (ಪಿಟಿಐ): ‘ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಪಡೆಗಳಿಂದ ನಿರ್ದಿಷ್ಟ ದಾಳಿ ನಡೆದೇ ಇಲ್ಲ ಎನ್ನುತ್ತಿರುವ ಪಾಕಿಸ್ತಾನದ ಬಂಡವಾಳ ಬಯಲುಗೊಳಿಸಲು, ದಾಳಿಯ ಬಗ್ಗೆ ಸಾಕ್ಷ್ಯ ಬಿಡುಗಡೆ ಮಾಡಬೇಕು’ ಎಂದು ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
‘ಭಯೋತ್ಪಾದಕರ ಶಿಬಿರಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿರುವುದು, ಸೇನೆ ನಡೆಸಿದ ಈ ಮಾದರಿಯ ಮೊದಲ ಕಾರ್ಯಾಚರಣೆ’ ಎಂಬ ಹೇಳಿಕೆಯನ್ನು ಅಲ್ಲಗಳೆದಿರುವ ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ, ‘ಅಗತ್ಯಕ್ಕೆ ಅನುಗುಣವಾಗಿ ಸೇನಾ ಪಡೆಗಳು ಈ ಹಿಂದೆಯೂ ಪ್ರತಿದಾಳಿ ನಡೆಸಿವೆ’ ಎಂದು ಹೇಳಿದರು.
ನಿರ್ದಿಷ್ಟ ದಾಳಿಯ ದೃಶ್ಯಾವಳಿ ಬಿಡುಗಡೆ ಮಾಡುವಂತೆ ಆಮ್ ಆದ್ಮಿ ಪಕ್ಷ (ಎಎಪಿ) ಮುಂದಿಟ್ಟಿರುವ ಬೇಡಿಕೆ ಕುರಿತು ಪ್ರತಿಕ್ರಿಯೆ ನೀಡಿದ ಶರ್ಮಾ, ‘ಸೇನೆ ನೀಡಿದ ಹೇಳಿಕೆಯ ಬಗ್ಗೆ ನಮ್ಮ ಪಕ್ಷಕ್ಕೆ ಎಳ್ಳಷ್ಟೂ ಅನುಮಾನ’ ಇಲ್ಲ ಎಂದರು.
Comments are closed.