ಪುಣೆ: ಕಳೆದ ಏಪ್ರಿಲ್ನಲ್ಲಿ ಜೆಎನ್ಯುು ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ ಯತ್ನ ನಡೆಸಿದ್ದ ಅಸ್ಸಾಂ ಯುವಕ ಅಮಿತ್ ಷಾ ಜತೆಗೆ ಸೆಲ್ಪಿ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಭಾನುವಾರ ಪ್ರಮೋದ್ ಮಹಾಜನ್ ಕೌಶಲ ಮತ್ತು ವಾಣಿಜ್ಯೋದ್ಯಮ ಮಿಷನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರನ್ನು ಮನಸ್ ದೇಕಾ ಸಂಘಟನೆ ಕಾರ್ಯಕರ್ತರು ಭೇಟಿಯಾಗಿದ್ದಾರೆ.
ಈ ವೇಳೆ ತೆಗೆದ ಸೆಲ್ಪಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದು, ಇದರಲ್ಲಿ ಕನ್ಹಯ್ಯಾ ಕೊಲೆ ಯತ್ನ ನಡೆಸಿದಾತನೂ ಇದ್ದಾನೆ ಎನ್ನಲಾಗಿದೆ.
Comments are closed.