ರಾಷ್ಟ್ರೀಯ

ನೆರೆಯ ಹುಡುಗರ ಜೊತೆ ಮಾತನಾಡಿದ್ದಕ್ಕೆ ಇಬ್ಬರು ಪುತ್ರಿಯರನ್ನು ಇರಿದ ತಂದೆ ! ಓರ್ವಳ ಸಾವು..ಇನ್ನೊಬ್ಬಳು ಗಂಭೀರ

Pinterest LinkedIn Tumblr

stab

ಪಣಜಿ: ನೆರೆಯ ಹುಡುಗರ ಜೊತೆ ಮಾತನಾಡಿದ್ದಕ್ಕೆ ಇಬ್ಬರು ಪುತ್ರಿಯರಿಗೆ ತಂದೆ ಚಾಕುವಿನಿಂದ ಇರಿದಿರುವ ಘಟನೆ ಪಣಜಿಯಲ್ಲಿ ನಡೆದಿದೆ.

ಕಳೆದ ರಾತ್ರಿ ಶಂಕರ್ ರೆಡ್ಡಿ(52) ಎಂಬಾತ ತನ್ನ ಪುತ್ರಿಯರಿಗೆ ಚಾಕುವಿನಿಂದ ಇರಿದಿದ್ದಾನೆ. ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹುಡುಕಿಕೊಂಡು ಹೋಗುವಾಗ 20 ಮತ್ತು 17 ವರ್ಷದ ಪುತ್ರಿಯರು ನೆರೆಯ ಹುಡುಗರ ಜೊತೆ ಮಾತನಾಡುತ್ತಿದ್ದನ್ನು ಕಂಡಿದ್ದಾರೆ. ಮನೆಗೆ ಬಂದ ನಂತರ ಇಬ್ಬರು ಪುತ್ರಿಯರಿಗೂ ಚಾಕುವಿನಿಂದ ಇರಿದಿದ್ದಾರೆ.

20 ವರ್ಷದ ಸುಜಾತ ಸ್ಥಳದಲ್ಲೇ ಸಾವನ್ನಪ್ಪಿದ್ದು, 17 ವರ್ಷದ ಪುತ್ರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರ ಶಂಕರ್ ರೆಡ್ಡಿ ಪೊಲೀಸರ ಬಳಿ ಬಂದು ಶರಣಾಗಿದ್ದು, ಸತ್ತಾರಿ ತಾಲ್ಲೂಕಿನ ವಾಲ್ ಪೋಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.