ನವದೆಹಲಿ: ನರೇಂದ್ರ ಮೋದಿ ದೇಶ ಕಂಡ ಮೂರ್ಖ ಪ್ರಧಾನಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಕೇಂದ್ರ ಎನ್ ಡಿ ಎ ಸರ್ಕಾರದ 2 ವರ್ಷದ ಸಾಧನೆ ಕುರಿತಂತೆ ಖಾಸಗಿ ಚಾನೆಲ್ ವೊಂದು ಏರ್ಪಡಿಸಿದ್ದ ಸಂವಾದ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ರಶೀಜ್ ಮೋದಿ ಅತಿ ಮೂರ್ಖ ಪ್ರಧಾನಿ ಎಂದು ಹೀಯಾಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಜೊತೆಯಲ್ಲೇ ಇರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
ಇನ್ನೂ ಅಲ್ವಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು, ಕೂಡಲೇ ಕ್ಷಮೆ ಕೇಳುವಂತೆ ಆಗ್ರಹಿಸಿದೆ.
Comments are closed.