ಅಮರಾವತಿ (ಮಹಾರಾಷ್ಟ್ರ): ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲ ತೀರಿಸಲಾಗದೆ ಒಂದೇ ಕುಟುಂಬದ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮರಾವತಿಯ ಬುಲ್ದಾನ ಜಿಲ್ಲೆಯ ಮಲ್ತಾನ ಗ್ರಾಮದಲ್ಲಿ ಸಂಭವಿಸಿದೆ. ಮೃತ ಪಟ್ಟ ರೈತರನ್ನು ದಿನೇಶ್ ಧ್ಯಾನಸಿಂಗ್ ಮಸಾಯ್ (35), ಲಕ್ಷ್ಮೀಬಾಯಿ ಧ್ಯಾನಸಿಂಗ್ ಮಸಾಯ್ (40), ಸುರೇಶ್ ಧ್ಯಾನಸಿಂಗ್ ಮಸಾಯ್ (19) ಎಂದು ಗುರುತಿಸಲಾಗಿದೆ.
ಮತ್ತೊಬ್ಬ ರೈತ ಧ್ಯಾನ್ಸಿಂಗ್ಸಾನು ಮಸಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಹಿನ್ನೆಲೆ: ದಿನೇಶ್ ಧ್ಯಾನಸಿಂಗ್ ಅವರು ಬ್ಯಾಂಕ್ನಿಂದ 1.50 ಲಕ್ಷ ಸಾಲ ಮಾಡಿ 4 ಎಕರೆ ಜಮೀನಿನಲ್ಲಿ ಸೋಯಾಬೀನ್ಸ್ ಬೆಳೆಯನ್ನು ಹಾಕಿದ್ದು ಫಸಲು ಕೈಕೊಟ್ಟಿದ್ದರಿಂದ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದ್ದಾರೆ ಎಂದು ಕಮ್ಗೌನ್ ಎಸ್ಪಿ ಯಶ್ವಂತ್ ಸೋಲಂಕಿ ತಿಳಿಸಿದ್ದಾರೆ.