ನವದೆಹಲಿ,ಏ.18-ವಿಶ್ವವಿಖ್ಯಾತಿ ಗಳಿಸಿದ ಕೊಹಿನೂರ್ ವಜ್ರವನ್ನು ಕಳವೂ ಮಾಡಿಲ್ಲ ಮತ್ತು ಬಲವಂತವಾಗಿಯೂ ತೆಗೆದುಕೊಂಡು ಹೋಗಿಲ್ಲ. ಆದ್ದರಿಂದ ನಾವು ಅದನ್ನು ಬ್ರಿಟನ್ನಿಂದ ಭಾರತಕ್ಕೆ ವಾಪಸ್ ತರುವ ಪ್ರಯತ್ನ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.
105 ಕ್ಯಾರಟ್ನ ವಜ್ರ ವಾಪಸ್ಗೆ ಪ್ರಯತ್ನಿಸಿದರೆ ಮುಂದೆ ತೊಂದರೆಗೀಡಾಗಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೊಹಿನೂರು ವಜ್ರ ಹಾಗೂ ಇತರ ಕೆಲವು ಚಾರಿತ್ರಿಕ ಮಹತ್ವದ ವಸ್ತುಗಳನ್ನು ಬ್ರಿಟನ್ನಿಂದ ವಾಪಸ್ ತರುವುದಕ್ಕಾಗಿ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಆಲ್ ಇಂಡಿಯ ಹ್ಯೂಮನ್ ರೈಟ್ಸ್ ಆಂಡ್ ಸೋಷಿಯಲ್ ಜಸ್ಟೀಸ್ ಫ್ರಂಟ್ ಎಂಬ ಸಂಸ್ಥೆ ಸುಪ್ರೀಂಕೋರ್ಟ್ಗ ಅರ್ಜಿ ಸಲ್ಲಿಸಿತ್ತು.