ಪಠಾಣ್ಕೋಟ್: ಪಠಾಣ್ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲಿಕ್ಕಾಗಿ ಐದು ಮಂದಿ ಸದಸ್ಯರ ಪಾಕಿಸ್ತಾನ ತಂಡ ಭಾನುವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿತು.
ಸೋಮವಾರ ಪಠಾಣ್ಕೋಟ್ನಲ್ಲಿ ದಾಳಿಗೆ ಸಂಬಂಧಿಸಿದಂತೆ ಕೆಲವರನ್ನು ವಿಚಾರಣೆ ನಡೆಸಲಿರುವ ಈ ತಂಡ, ಭಾರತ ನೀಡಿರುವ ಅನೇಕ ಸಂಗತಿಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುವ ಉದ್ದೇಶ ಹೊಂದಿದೆ.
ಪಂಜಾಬ್ನ ಉಗ್ರ ನಿಗ್ರಹ ಘಟಕ (ಸಿಟಿಡಿ) ಮುಖ್ಯಸ್ಥ, ಹೆಚ್ಚುವರಿ ಪೊಲೀಸ್ ಪ್ರಧಾನ ಆರಕ್ಷಕ ಮೊಹಮ್ಮದ್ ತಹಿರ್ ರೈ, ಲಾಹೋರ್ನ ಗುಪ್ತಚರ ಇಲಾಖೆ ಉಪನಿರ್ದೇಶಕ ಮೊಹಮ್ಮದ್ ಅಜೀಂ ಅರ್ಶದ್, ಐಎಸ್ಐ ಎಲ್ಪಿನೆಂಟ್ ಕರ್ನಲ್ ತನ್ವಿರ್ ಅಹಮ್ಮದ್, ಮಿಲಟರಿ ಗುಪ್ತಚರ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಇರ್ಫಾನ್ ಮಿರ್ಜಾ ಮತ್ತು ಗುಜರನ್ವಾಲಾ ಸಿಟಿಡಿ ತನಿಖಾಧಿಕಾರಿ ಶಾಹಿದ್ ತನ್ವೀರ್ ತನಿಖಾ ತಂಡದಲ್ಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಪಾಕಿಸ್ತಾನ ತನಿಖಾ ತಂಡ ಗುರುದಾಸ್ಪುರದ ಎಸ್ಪಿ ಸಲ್ವಿಂದರ್ ಸಿಂಗ್ ಹಾಗೂ ಅವರ ಕೆಳಗಿನ ಕೆಲ ಅಧಿಕಾರಿಗಳ ಜತೆ ರ್ಚಚಿಸಲಿದೆ. ಅಲ್ಲದೆ ದಾಳಿಯಲ್ಲಿ ಗಾಯಗೊಂಡ 17 ಮಂದಿ ಭದ್ರತಾ ಪಡೆ ಸಿಬ್ಬಂದಿ, ಎನ್ಎಸ್ಜಿ, ಬಿಎಸ್ಎಫ್ ಹಾಗೂ ಗಾರ್ಡ್ ಕಮಾಂಡೋಗಳ ಜತೆ ಮಾತುಕತೆ ನಡೆಸಲಿದೆ.