ರಾಷ್ಟ್ರೀಯ

‘ಘೋಷಣೆ ಕುರಿತ ವಿವಾದಗಳು ಅರ್ಥಹೀನ’: ಎಲ್.ಕೆ.ಅಡ್ವಾಣಿ

Pinterest LinkedIn Tumblr

adwaniಅಹಮದಾಬಾದ್: ‘ಭಾರತ್ ಮಾತಾ ಕಿ ಜೈ’ ಘೋಷಣೆ ಕುರಿತಂತೆ ಸೃಷ್ಟಿಯಾದ ವಿವಾದಗಳು ಅರ್ಥಹೀನ ಎಂದು ಮಾಜಿ ಉಪ ಪ್ರಧಾನಿ, ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.

ಈ ಕುರಿತಂತೆ ಅಭಿಪ್ರಾಯ ತಿಳಿಸುವಂತೆ ವರದಿಗಾರರು ಕೇಳಿಕೊಂಡಾಗ, ನಾನು ಈ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಇದು ಅರ್ಥಹೀನ ವಿವಾದ ಎಂದು ಅಡ್ವಾಣಿ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕೆಲ ದಿನಗಳ ಹಿಂದೆ ಯುವಜನಾಂಗಕ್ಕೆ ದೇಶಭಕ್ತಿಯ ಘೋಷಣೆಗಳನ್ನು ಬೋಧಿಸಬೇಕು ಎಂದು ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಎಐಎಮ್ಎಮ್ಐ ನಾಯಕ ಓವೈಸಿ ಸಂವಿಧಾನವೇನು ‘ಭಾರತ್ ಮಾತಾ ಕಿ ಜೈ’ ಎಂದು ಹೇಳಬೇಕೆಂದು ಹೇಳುವುದಿಲ್ಲ. ನನ್ನ ಕುತ್ತಿಗೆ ಮೇಲೆ ಕತ್ತಿ ಇಟ್ಟರೂ ನಾನದನ್ನು ಹೇಳಲಾರೆ ಎಂದು ಹೇಳುವುದರ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು.

Write A Comment