ರಾಷ್ಟ್ರೀಯ

ಪೊಲೀಸರ ವಿರುದ್ಧ ವಾಟ್ಸ್ ಅಪ್ ನಲ್ಲಿ ‘ಮಾಮ’ ಎಂದು ಅವಹೇಳನಕಾರಿ ಸಂದೇಶ: ಪತ್ರಕರ್ತನ ಬಂಧನ

Pinterest LinkedIn Tumblr

whats-app

ರಾಯ್ಪುರ: ಪೊಲೀಸರ ವಿರುದ್ದ ಅವಹೇಳನಕಾರಿ ಪದಬಳಕೆ ಮಾಡಿ ವಾಟ್ಸ್ ಅಪ್ ನಲ್ಲಿ ಸಂದೇಶ ಕಳುಹಿಸಿದ್ದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಭಾತ ಸಿಂಗ್ ಎಂಬ ಛತ್ತೀಸ್​ಗಢದ ಪತ್ರಕರ್ತ ವಾಟ್ಸ್​ಆಪ್​ನಲ್ಲಿ ಅವಹೇಳನಕಾರಿ ಸಂದೇಶ ಬಿತ್ತರಿಸಿರುರುವುದಾಗಿ ಪೊಲೀಸರು ಹೇಳಿದ್ದಾರೆ. ಪ್ರಭಾತ ಸಿಂಗ್ ಅವರು ಪತ್ರಕರ್ತರ ರಕ್ಷಣಾ ಕಾನೂನು ವಿಚಾರವಾಗಿ ಪೊಲೀಸರನ್ನು ನಿಂದಿಸಿದ್ದರು. ಇದೀಗ ಪ್ರಭಾತ್ ಸಿಂಗ್​ರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪತ್ರಕರ್ತನಿಗೆ ಮಾರ್ಚ್ 31ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದೇ ಸಂದರ್ಭದಲ್ಲಿ ಸ್ಥಳೀಯ ಇಬ್ಬರು ಪತ್ರಕರ್ತರಾದ ಸೋಮರು ನಾಗ್ ಹಾಗೂ ಸಂತೋಷ್ ಯಾದವ್ ಅವರನ್ನು ನಕ್ಸಲರಿಗೆ ಸಹಾಯಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

Write A Comment