ರಾಯ್ಪುರ: ಪೊಲೀಸರ ವಿರುದ್ದ ಅವಹೇಳನಕಾರಿ ಪದಬಳಕೆ ಮಾಡಿ ವಾಟ್ಸ್ ಅಪ್ ನಲ್ಲಿ ಸಂದೇಶ ಕಳುಹಿಸಿದ್ದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಭಾತ ಸಿಂಗ್ ಎಂಬ ಛತ್ತೀಸ್ಗಢದ ಪತ್ರಕರ್ತ ವಾಟ್ಸ್ಆಪ್ನಲ್ಲಿ ಅವಹೇಳನಕಾರಿ ಸಂದೇಶ ಬಿತ್ತರಿಸಿರುರುವುದಾಗಿ ಪೊಲೀಸರು ಹೇಳಿದ್ದಾರೆ. ಪ್ರಭಾತ ಸಿಂಗ್ ಅವರು ಪತ್ರಕರ್ತರ ರಕ್ಷಣಾ ಕಾನೂನು ವಿಚಾರವಾಗಿ ಪೊಲೀಸರನ್ನು ನಿಂದಿಸಿದ್ದರು. ಇದೀಗ ಪ್ರಭಾತ್ ಸಿಂಗ್ರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪತ್ರಕರ್ತನಿಗೆ ಮಾರ್ಚ್ 31ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದೇ ಸಂದರ್ಭದಲ್ಲಿ ಸ್ಥಳೀಯ ಇಬ್ಬರು ಪತ್ರಕರ್ತರಾದ ಸೋಮರು ನಾಗ್ ಹಾಗೂ ಸಂತೋಷ್ ಯಾದವ್ ಅವರನ್ನು ನಕ್ಸಲರಿಗೆ ಸಹಾಯಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.