ದೆಹಲಿ: ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬುಧವಾರ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.
ವೇಮುಲ ಸಾವಿನ ಬಳಿಕ ಅನಿರ್ದಿಷ್ಟ ರಜೆ ಮೇಲೆ ತೆರಳಿದ್ದ ವಿವಿ ಉಪಕುಲಪತಿ ಅಪ್ಪಾ ರಾವ್ ಪೊಡಿಲೆ ಮಂಗಳವಾರ ಕೆಲಸಕ್ಕೆ ಹಿಂತಿರುಗಿದ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.
ಅಪ್ಪಾರಾವ್ ಇಂದು ಪತ್ರಿಕಾಗೋಷ್ಠಿ ನಡೆಸಲಿದ್ದ ಅವರ ನಿವಾಸವನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ನಾಶ ಮಾಡಿದ್ದಾರೆ.
ದೇಶದ್ರೋಹದ ಆರೋಪದಿಂದಾಗಿ ಜೈಲು ಸೇರಿ ಬಿಡುಗಡೆಗೊಂಡ ಕನ್ಹಯ್ಯ ಕುಮಾರ್ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದರು.