ಮುಂಬಯಿ: ನಟ ಅಕ್ಷಯ್ ಕುಮಾರ್ ಬರ ಪೀಡಿತ ಪ್ರದೇಶದ ರೈತರ ನೆರವಿಗೆ ಮತ್ತೊಮ್ಮೆ ಧಾವಿಸಿದ್ದಾರೆ. ಕಳೆದ ವರ್ಷ ಬರದಿಂದ ತತ್ತರಿಸಿ ಹೋಗಿದ್ದ ರೈತರಿಗೆ ಒಟ್ಟು 90 ಲಕ್ಷ ರೂಪಾಯಿ ನೆರವು ನೀಡಿದ್ದ ಅಕ್ಷಯ್, ಈ ಬಾರಿ ರೈತರಿಗಾಗಿ ತಮ್ಮ ಸಂಭಾವನೆಯನ್ನ ಅರ್ಧದಷ್ಟು ಕಡಿಮೆ ಮಾಡಿದ್ದಾರಂತೆ.
ಅಕ್ಷಯ್ ಕುಮಾರ್, ಡ್ರಿಂಕ್ ಮಿಕ್ಸ್ ಮೇಕರ್ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಪ್ಪಂದದ ಪ್ರಕಾರ ಈ ವರ್ಷ ಅವರ ಸಂಭಾವನೆಯಲ್ಲಿ ಏರಿಕೆಯಾಗಬೇಕಿತ್ತು. ಆದರೆ ಕಂಪನಿ, ರೈತರು ಬರದಿಂದ ತತ್ತರಿಸಿ ಹೋಗಿದ್ದಾರೆ ಹಾಗಾಗಿ ಸಾಕಷ್ಟು ಪ್ರಮಾಣದ ಹಣ್ಣು ದೊರೆಯುತ್ತಿಲ್ಲ ಆದ್ದರಿಂದ ರೈತ ಹಾಗೂ ಕಂಪನಿ ಸಂಕಷ್ಟ ಪರಿಸ್ಥಿತಿಯಲ್ಲಿ ಇರುವುದಾಗಿ ಹೇಳಿಕೊಂಡಿತಂತೆ.
ಒಪ್ಪಂದದ ಪ್ರಕಾರ ಈ ಬಾರಿ 10 ಕೋಟಿ ಸಂಭಾವನೆ ಪಡೆಯಬೇಕಿದ್ದ ಅಕ್ಷಯ್, ರೈತರಿಗಾಗಿ ಅರ್ಧ ಸಂಭಾವನೆಯನ್ನು ಇಳಿಸಿಕೊಂಡರಂತೆ. ವಿಭಿನ್ನ ಪಾತ್ರಗಳ ಮೂಲಕ ಬೆಳ್ಳಿತೆರೆ ಮೇಲೆ ರಾರಾಜಿಸ್ತಿರೋ ಅಕ್ಷಯ್ ನಿಜ ಜೀವನದಲ್ಲೂ ಅದೇ ರೀತಿಯ ಆದರ್ಶಗಳನ್ನು ಪಾಲಿಸುತ್ತಿರುವುದು ಪ್ರಶಂಸನೀಯ.