ವಾರಣಾಸಿ: ಅಸಾದುದ್ದೀನ್ ಓವೈಸಿ ಭಾರತ್ ಮಾತಾ ಕಿ ಜೈ ಎನ್ನಲು ವಿರೋಧವಿದ್ದರೆ ಅವರ ನಾಲಗೆಯನ್ನು ಕತ್ತರಿಸಿ ಬಿಡಬೇಕು ಅವರಿಗೆ ನಾನು ಒಂದು ಕೋಟಿ ರೂಪಾಯಿ ಬಹುಮಾನವನ್ನು ನೀಡುತ್ತೇನೆ ಎಂದು ವಿವಾದಾತ್ಮಕ ಹೆಳಿಕೆಯನ್ನು ನೀಡಿದ್ದ ಬಿಜೆಪಿ ಯುವ ಘಟಕದ ಉಪಾಧ್ಯಕ್ಷ ಶ್ಯಾಮ ದ್ವಿವೇದಿಯವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿದೆ.
ದ್ವಿವೇದಿಯರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದ್ದು, ತತ್ ಕ್ಷಣದಿಂದಲೇ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಪೂರ್ವ ಉತ್ತರ ಪ್ರದೇಶದ ಬಿಜೆಪಿ ಮಾಧ್ಯಮ ಉಸ್ತುವಾರಿ ಸ್ಪಷ್ಟ ಪಡಿಸಿದ್ದಾರೆ.
ಪಕ್ಷ ಈ ರೀತಿಯ ಹೇಳಿಕೆಗಳನ್ನು ಬೆಂಬಲಿಸದ ಕಾರಣಕ್ಕೆ ಹಿರಿಯ ನಾಯಕರ ಸೂಚನೆ ಮೇರೆಗೆ ಕಾಶಿ ವಿಭಾಗದ ಬಿಜೆಪಿ ಅಧ್ಯಕ್ಷ ಲಕ್ಷ್ಮಣ್ ಆಚಾರ್ಯ ಈ ಕ್ರಮವನ್ನು ಕೈಗೊಂಡಿದ್ದಾರೆ ಎಂದು ಕಮಲ ಪಾಳೆಯದ ಮೂಲಗಳು ತಿಳಿಸಿವೆ.