ರಾಷ್ಟ್ರೀಯ

ಮಾ.27ರಂದು ಪಾಕ್ ತನಿಖಾ ತಂಡ ಭಾರತಕ್ಕೆ

Pinterest LinkedIn Tumblr

sushma-e1458222141920ಪೋಖರಾ: ಪಠಾಣ್​ಕೋಟ್ ಉಗ್ರರ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಪಾಕ್ ತನಿಖಾ ತಂಡ ಮಾರ್ಚ್ 27ರಂದು ಭಾರತಕ್ಕೆ ಆಗಮಿಸಲಿದೆ.

ಪೋಖರಾದಲ್ಲಿ ಗುರುವಾರ ಸಂಜೆ ಸುಷ್ಮಾ ಸ್ವರಾಜ್ ಮತ್ತು ಸರ್ತಾಜ್ ಅಜೀಜ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ವೇಳೆ ಅಜೀಜ್ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಜೀಜ್ ಅಧಿಕೃತ ಆಮಂತ್ರಣ ನೀಡಿದ್ದಾರೆ.

ಪಠಾಣ್​ಕೋಟ್ ದಾಳಿ ವಿಚಾರದ ಜೊತೆಯಲ್ಲಿ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದೇವೆ. ಅಮೆರಿಕದಲ್ಲಿ ನಡೆಯಲಿರುವ ಪರಮಾಣು ಭದ್ರತಾ ಶೃಂಗ ಸಭೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಅಜೀಜ್ ತಿಳಿಸಿದರು.

Write A Comment