ರಾಂಚಿ: ವ್ಯಕ್ತಿಯೊಬ್ಬ ಮಹಿಳೆಯನ್ನು ದೆವ್ವ ಎಂದು ತಿಳಿದು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನ ಸಿಂಗ್ಬುಮ್ ಜಿಲ್ಲೆಯ ನಾನ್ಸೋಲ್ ಎಂಬ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ 52 ವರ್ಷ ವಯಸ್ಸಿನ ಜೋಧಾ ಸಿಂಗ್ ಗುರುವಾರ ರಾತ್ರಿ ನಿರ್ಜನ ಪ್ರದೇಶದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅಹಾಲಿಯ ಸಿಂಗ್ ಎಂಬ ಮಹಿಳೆ ಹಿಂದಿನಿಂದ ಬಂದು ಜೋಧಾ ಸಿಂಗ್ನನ್ನು ಮುಟ್ಟಿದ್ದೇ ತಡ ಆಕೆಯನ್ನು ದೆವ್ವ ಎಂದು ತಿಳಿದು ಕೋಲಿನಿಂದ ಮನಸೋ ಇಚ್ಛೆ ಥಳಿಸಿದ್ದ. ಇದರ ಪರಿಣಾಮ ಅಹಾಲಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಘಟನೆಯ ಬಗ್ಗೆ ತಿಳಿದು ಅಹಾಲಿಯಾರ ಕುಟುಂಬದವರು ಸ್ಥಳಕ್ಕೆ ಧಾವಿಸಿದಾಗ ಆಕೆಯ ಮೆದುಳಿನ ಭಾಗ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಈ ವೇಳೆ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಜೋಧಾ ಸಿಂಗ್ನನ್ನು ಸ್ಥಳೀಯರು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ನಡುರಾತ್ರಿಯಲ್ಲಿ ಯಾರೋ ಬಂದು ಮುಟ್ಟಿದ್ದರಿಂದ ದೆವ್ವ ಎಂದು ತಿಳಿದು ಭಯದಿಂದ ಜೀವ ಉಳಿಸಿಕೊಳ್ಳಲು ಹೊಡೆದಿರುವುದಾಗಿ ಹೇಳಿದ್ದಾನೆ.