ರಾಷ್ಟ್ರೀಯ

ಕ್ವಟ್ರೋಚಿ ಎಸ್ಕೇಪ್ ಆಗಲು ಅವಕಾಶ ಕೊಟ್ಟವರ್ಯಾರು?

Pinterest LinkedIn Tumblr

Arun-Jaitley-e1457611230746ದೆಹಲಿ: ದೇಶಬಿಟ್ಟು ಹೋಗಿರುವ ಕ್ವಟ್ರೋಚಿ ಪ್ರಕರಣಕ್ಕೂ, ವಿಜಯ್ ಮಲ್ಯ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂಬುದನ್ನು ರಾಹುಲ್ ಗಾಂಧಿ ತಿಳಿದುಕೊಳ್ಳಲಿ ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ.

ಮದ್ಯದ ದೊರೆ ವಿಜಯ್ ಮಲ್ಯ ಸಾಲ ಪಾವತಿಸಲು ಬಾಕಿ ಇದೆ ಎಂಬುವುದು ತಿಳಿದಿದ್ದರೂ ಅವರನ್ನು ದೇಶಬಿಟ್ಟು ಹೋಗಲು ಸರ್ಕಾರ ಯಾಕೆ ಅನುಮತಿ ನೀಡಿತ್ತು ಎಂದು ರಾಹುಲ್ ಕೇಂದ್ರ ಸರಕಾರಕ್ಕೆ ಪ್ರಶ್ನಿಸಿದ್ದರು. ಈ ವೇಳೆ ಜೇಟ್ಲಿ, ಕ್ವಟ್ರೋಚಿ ದೇಶ ಬಿಟ್ಟು ಹೋಗಲು ಅವಕಾಶ ಕೊಟ್ಟಿದ್ದೀರಿ ಎಂದು ರಾಹುಲ್ ಗೆ ಮರು ಪ್ರಶ್ನಿಸಿದ್ದರು.

1980ರ ದಶಕದ ಬೋಫೋರ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ 1993ರಲ್ಲಿ ಭಾರತ ಬಿಟ್ಟು ತೆರಳಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ರಾಹುಲ್ ಗೆ ಬಿಸಿ ಮುಟ್ಟಿಸಿದೆ.

Write A Comment