ಮಂತ್ರಾಲಯ: ಹರಿದಾಸರು ಆಂಜನೇಯನ ಬಗ್ಗೆ ರಚಿಸಿರುವ 108 ಕೀರ್ತನೆಗಳ ಗಾಯನ ಆರಂಭಗೊಂಡಿದೆ.ರಾಯರ ಮಠದ ಹೊರಗೆ ಈ ಕಾರ್ಯಕ್ರಮ ನಡೆಯುತ್ತಿದೆ.
ಸತತ ಆರು ಗಂಟೆಗಳ ಕಾಲ ನಡೆಯಲಿರುವ ಗಾಯನ ಕಾರ್ಯಕ್ರಮದಲ್ಲಿ 1800 ಮಹಿಳೆಯರು ಹಾಡುತ್ತಿದ್ದಾರೆ.
‘ತೆಲುಗು ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ದಾಖಲೆಗಾಗಿ ಶ್ರೀಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜಕ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಗಾಯನಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಸುಬುಧೇಂದ್ರ ತೀರ್ಥರು ಮಾತನಾಡಿದರು.