ರಾಷ್ಟ್ರೀಯ

ಗೂಂಡಾ ರಾಜ್ಯ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಗುಂಡಿಟ್ಟ ಎಸ್‌ಪಿ ಶಾಸಕನ ಸಹೋದರ

Pinterest LinkedIn Tumblr

shootout

ಲಖನೌ: ಉತ್ತರಪ್ರದೇಶದಲ್ಲಿ ಗೂಂಡಾ ರಾಜ್ಯ ಪರಿಸ್ಥಿತಿ ಮರುಕಳಿಸಿದೆ. ಸಮಾಜವಾದಿ ಪಕ್ಷದ ಶಾಸಕನ ಸಹೋದರ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವನಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

ಕಾರು ಓವರ್ ಟೆಕ್ ಮಾಡಿದ ಎಂಬ ಕಾರಣಕ್ಕೆ ಸ್ವತಃ ಸಮಾಜವಾದಿ ಪಕ್ಷದ ಶಾಸಕ ಜಗರಾಮ್ ಪಾಸ್ವಾನ್ ಸಹೋದರ ವ್ಯಕ್ತಿಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲರಾಮ್ ಪುರದಲ್ಲಿ ನಡೆದಿದೆ.

ಶಾಸಕ ಸಹೋದರನ ವಿರುದ್ಧ ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Write A Comment