ರಾಷ್ಟ್ರೀಯ

ಕನಯ್ಯಾನಿಗೆ ಗುಂಡಿಟ್ಟರೆ ರು. 11 ಲಕ್ಷ ಇನಾಮು ನೀಡುತ್ತೇನೆ ಎಂದವನ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ?

Pinterest LinkedIn Tumblr

adarsh_sharma

ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳ ಮುಖಂಡ ಕನಯ್ಯಾ ಕುಮಾರ್ ಅವರಿಗೆ ಗುಂಡಿಟ್ಟರೆ ರು. 11 ಲಕ್ಷ ಇನಾಮು ಕೊಡುತ್ತೇನೆ ಎಂದು ಘೋಷಿಸಿದ್ದ ಪೂರ್ವಾಂಚಲ್ ಸೇನಾ ಅಧ್ಯಕ್ಷ ಆದರ್ಶ್ ಶರ್ಮಾ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ? ರು. 150 !

ರೋಹಿಣಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ಶರ್ಮಾ, ಹಲವಾರು ತಿಂಗಳಿನಿಂದ ಬಾಡಿಗೆಯನ್ನೂ ಪಾವತಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕನಯ್ಯಾ ಅವರನ್ನು ಹತ್ಯೆ ಮಾಡಿದರೆ ಪೂರ್ವಾಂಚಲ್ ಸೇನೆ ವತಿಯಿಂದ ರು. 11 ಲಕ್ಷ ಬಹುಮಾನವನ್ನು ನೀಡಲಾಗುವುದು ಎಂದು ಬರೆದ ಕರಪತ್ರವನ್ನು ಶರ್ಮಾ ಹಂಚಿದ್ದರು. ಈ ರೀತಿ ಕರಪತ್ರ ಹಂಚುದುದಕ್ಕಾಗಿ ಪೊಲೀಸರು ಈತನ ವಿರುದ್ಧ ಕೇಸು ದಾಖಲಿಸಿದ್ದರು.

ಕೇಸು ದಾಖಲಾದ ನಂತರ ಶರ್ಮಾ ತಲೆ ಮರೆಸಿಕೊಂಡಿದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Write A Comment