ನವದೆಹಲಿ: ಜವಹರ್ ಲಾಲ್ ವಿವಿ ದೇಶದ್ರೋಹಿ ಪ್ರಕರಣದಲ್ಲಿ ಬಂಧಿತರಾಗಿದ್ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಕುಮಾರ್ ಪರ, ಭಾರತೀಯ ಕ್ರಿಕೆಟ್ ತಾರೆ ಸುರೇಶ್ ರೈನಾ ಬ್ಯಾಟಿಂಗ್ ಮಾಡಿದ್ದಾರೆ.
ದೆಹಲಿ ಹೈಕೋರ್ಟ್ ಜಾಮೀನು ನೀಡಿದ ನಂತರ ಖಾಸಗಿ ಚಾನೆಲ್ ವೊಂದರಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದ ಕನ್ಹಯ್ಯಾ ಕುಮಾರ್ ಮಾತುಗಳಿಗೆ ಸುರೇಶ್ ರೈನಾ ಅಭಿನಂದಿಸಿದ್ದಾರೆ. ಈ ಸಂಬಂಧ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕನ್ಹಯ್ಯಾ ಅವರ ಪ್ರತಿಯೊಂದು ಮಾತು ಸತ್ಯವಾಗಿವೆ ಎಂದು ನನಗೆ ಅನ್ನಿಸುತ್ತಿದೆ, ಪ್ರಾಮಾಣಿಕ ಹೋರಾಟಗಾರನಿಗೆ ತಾವು ವಂದಿಸುವುದಾಗಿ ರೈನಾ ಬರೆದುಕೊಂಡಿದ್ದಾರೆ.
ಸುರೇಶ್ ರೈನಾ ಹಾಗಿಕುವ ಪೋಸ್ಟ್ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಫೇಸ್ ಬುಕ್ ನಲ್ಲಿ ರೈನಾ ಮಾಡಿರುವ ಅಪ್ ಲೋಡ್ ಗೆ 23 ಸಾವಿರ ಲೈಕ್ಸ್ ಹಾಗೂ 3 ಸಾವಿರಕ್ಕೂ ಅಧಿಕ ಶೇರ್ ಆಗಿದೆ.