ರಾಷ್ಟ್ರೀಯ

‘ಪಾಕ್ ಪರ ಜಿಂದಾಬಾದ್ ಎಂದು ಕೂಗಿದರೆ ಇಂಚಿಂಚಾಗಿ ಕತ್ತರಿಸುತ್ತೇನೆ’

Pinterest LinkedIn Tumblr

pakಕೋಲ್ಕತ್ತ, ಮಾ.3-ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಭಾರೀ ಪೈಪೋಟಿಗಿಳಿದವರಂತೆ ಕಾಣುವ ಬಿಜೆಪಿ ನಾಯಕರು ದೇಶಪ್ರೇಮ, ದೇಶದ್ರೋಹಗಳ ಕುರಿತಂತೆ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದು, ಇದಕ್ಕೆ ಇನ್ನೊಂದು ಹೊಸ ಸೇರ್ಪಡೆ ಪಶ್ಚಿಮಬಂಗಾಳದ ಬಿಜೆಪಿ ನಾಯಕ ದಿಲೀಪ್‌ಘೋಷ್ ಅವರು. ಯಾರಾದರೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರೆ ಅವರನ್ನು ಸಾರ್ವಜನಿಕವಾಗಿ ಇಂಚಿಂಚಾಗಿ ಕತ್ತರಿಸಿ ಹಾಕಲಾಗುವುದು ಎಂದು ಹೇಳುವ ಮೂಲಕ ಭಾರೀ ವಿವಾದಕ್ಕೆ ಬಿಜೆಪಿ ನಾಯಕ ನಾಂದಿ ಹಾಡಿದ್ದಾರೆ.

ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಸಾರ್ವಜನಿಕ ಸ್ಥಳದಲ್ಲಿ ತಲೆ ಕತ್ತರಿಸಿ, ದೇಹವನ್ನು ಇಂಚಿಂಚಾಗಿ ಕತ್ತರಿಸಿ ಹಾಕುತ್ತೇನೆ ಎಂದು ಬೀರ್‌ಭೂಮ್ ಜಿಲ್ಲೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಘೋಷಿಸಿದ್ದಾರೆ. ಇದೇ ರೀತಿ ಕೇಂದ್ರ ಸಚಿವ ರಾಮ್‌ಶಂಕರ್ ಕಥೇರಿಯಾ, ಆಗ್ರಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿ, ಹಿಂದೂ ಸಮುದಾಯದ ವಿರುದ್ಧ ಭಾರೀ ಸಂಚು ನಡೆದಿದೆ. ಹಾಗಾಗಿ ನಾವು ಬಲಿಷ್ಠರಾಗ ಬೇಕಾಗಿದೆ. ನಮ್ಮ ವೈರಿಗಳನ್ನು ಬಗ್ಗು ಬಡಿಯಲು ನಾವು ಬಲಿಷ್ಠರಾಗಬೇಕು. ಹಿಂದುಗಳ ಸಂಖ್ಯೆ ಹೆಚ್ಚಬೇಕು ಎಂದು ಪ್ರಚೋದನಕಾರಿಯಾಗಿ ಮಾತಾನಡಿದ್ದರು. ವಿಶ್ವಹಿಂದೂ ಪರಿಷತ್ ಮುಖಂಡ ಅರುಣ್ ಮಹೌರ್ ಹತ್ಯೆ ಹಿನ್ನೆಲೆಯಲ್ಲಿ ಕಥೇರಿಯಾ ಈ ಹೇಳಿಕೆ ನೀಡಿದ್ದರು. ಮತ್ತೊಬ್ಬ ಬಿಜೆಪಿ ಸಂಸದ ಬಾಬೂಲಾಲ್ ಕೂಡ ಇಂಥದ್ದೇ ಹೇಳಿಕೆ ನೀಡಿದ್ದರು.

Write A Comment