ಕೋಲ್ಕತಾ: ಶ್ರೀರಾಮ ದೇವರು ಭಾರತೀಯ ಸಂಸ್ಕ್ರತಿಯ ಪ್ರತೀಕ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪ್ರತಿರೂಪ. ಆದ್ದರಿಂದ, ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ನಿರ್ಮಿಸುವ ಮೂಲಕ ದೇವರನ್ನು ಗೌರವಿಸಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ವಿವಿಧತೆಯಲ್ಲಿ ಏಕತೆಯನ್ನು ಸಾರುವುದೇ ನಮ್ಮ ಸಂಸ್ಕ್ರತಿಯ ಮೂಲ ತಿರುಳಾಗಿದೆ. ಪ್ರತಿಯೊಂದು ಸಮುದಾಯವನ್ನು ಜೊತೆಗೆ ಕರೆದುಕೊಂಡು ಹೋಗುವ ಭವ್ಯ ಮೌಲ್ಯಗಳಿವೆ ಎಂದು ಭಾಗವತ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಗುರಿ ಬೇರೆ ಸಮುದಾಯದವರನ್ನು ವಿರೋಧಿಸುವುದಕ್ಕಲ್ಲ ಎಂದು ಸ್ಪಷ್ಟಪಡಿಸಿದರು. ಭವ್ಯವಾದ ರಾಮಮಂದಿರ ನಿರ್ಮಾಣಕ್ಕಾಗಿ ಸಂಕಲ್ಪ ತೊಡುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ನಮ್ಮ ಸಂಸ್ಕ್ರತಿಯೇ ನಮ್ಮ ಗುರಿ. ದೇವಾಲಯ ನಿರ್ಮಾಣ ನಮ್ಮ ಶ್ರೇಷ್ಠ ಗುರಿ. ಅಯೋಧ್ಯೆ ಶ್ರೀರಾಮ ದೇವರ ಜನ್ಮಸ್ಥಳವಾಗಿದ್ದರಿಂದ ಮೌಲ್ಯಗಳ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.