ಮನೋರಂಜನೆ

ಅಭದ್ರತಾ ಭಾವನೆಯಿಂದ ಆತಂಕಗೊಂಡು ದೇಶ ಬಿಟ್ಟು ಹೋಗೋಣ ಎಂದಿದ್ದಳಂತೆ ಅಮಿರ್ ಖಾನ್ ಪತ್ನಿ !

Pinterest LinkedIn Tumblr

Amir-Khan-With-Kiran-Rao

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ವಿರುದ್ಧದ ಸಾಂಸ್ಕೃತಿಕ ವಲಯದ ಜನಾಗ್ರಹಕ್ಕೆ ಖ್ಯಾತ ನಟ ಅಮೀರ್ ಖಾನ್ ದನಿಗೂಡಿಸಿದ್ದು, ಈ ವಾತಾವರಣದಿಂದ ಭೀತಗೊಂಡು ದೇಶ ತೊರೆದು ಹೋಗೋಣ ಎಂದು ಪತ್ನಿ ಸಲಹೆ ನೀಡಿದ್ದಳು ಎಂದು ಹೇಳಿದ್ದಾರೆ.

ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಸು ನೀಡುತ್ತಿರುವ ಸಾಹಿತಿಗಳ ಕ್ರಮವನ್ನು ಸಮರ್ಥಿಸಿಕೊಂಡರು.

ಕಳೆದ ಆರೆಂಟು ತಿಂಗಳುಗಳಿಂದ ತಾನೂ ಕೂಡ ಅಭದ್ರತಾ ಭಾವನೆ ಅನುಭವಿಸುತ್ತಿದ್ದೇನೆ. ದಿನನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿರುವ ಸಂಗತಿಗಳು ನನ್ನನ್ನು ಆತಂಕ್ಕೀಡುಮಾಡುತ್ತಿವೆ. ನಾನದನ್ನು ನಿರಾಕರಿಸಲಾರೆ.

ಈ ಕುರಿತು ನಾನು ಮನೆಯಲ್ಲಿ ಪತ್ನಿಯ ಜತೆ ಮಾತನಾಡುತ್ತಿರುವಾಗ, ನಾವು ದೇಶ ತೊರೆದು ಹೋಗೋಣವೆ ಎಂದು ಕಿರಣ್ ರಾವ್ ನನ್ನನ್ನು ಪ್ರಶ್ನಿಸಿದ್ದಳು. ಆಕೆ ನಮ್ಮ ಮಕ್ಕಳ, ಅವರ ಭವಿಷ್ಯದ ಕುರಿತು ಹೆದರಿದ್ದಳು. ಆಕೆ ದಿನಪತ್ರಿಕೆ ತೆರೆಯಲು ಹೆದರುತ್ತಾಳೆ ಎಂದು ಅಮೀರ್ ನುಡಿದರು.

Write A Comment