ನವದೆಹಲಿ: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ, ಕಾಂಗ್ರೆಸ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ” ಕಮೀಷನ್ ಏಜೆಂಟ್” ಎಂದು ಕರೆದಿದ್ದಾರೆ.
“ಇವರಿಬ್ಬರ ಒಟ್ಟು ಆಸ್ತಿ ಮೌಲ್ಯ 2.50 ಲಕ್ಷ ಕೋಟಿ. ಇದು ನಮ್ಮ ದೇಶದ ಆದಾಯ ತೆರಿಗೆಯ ಒಟ್ಟು ಮೌಲ್ಯಕ್ಕಿಂತಲೂ ಅಧಿಕ”, ಎಂದು ಸ್ವಾಮಿ ಆರೋಪಿಸಿದ್ದಾರೆ.
ಅಹಮದಾಬಾದ್ನಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, “ರಾಹುಲ್ ಟರ್ಕಿಯ ಪೌರತ್ವನ್ನು ಹೊಂದಿದ್ದಾರೆಯೆ ಎಂಬುದನ್ನು ಪರಿಶೀಲಿಸಬೇಕು. ಜತೆಗೆ ಅವರು ಯಾವ ಯಾವ ದೇಶಗಳ ಪೌರತ್ವವನ್ನು ಹೊಂದಿದ್ದಾರೆ”, ಎಂಬುದನ್ನು ಕಂಡು ಹಿಡಿಯಬೇಕಿದೆ ಎಂದಿದ್ದಾರೆ.
“ಸೋನಿಯಾ ಮತ್ತು ರಾಹುಲ್ ವಿವಿಧ ಕಂಪನಿಗಳ ನಿರ್ದೇಶಕರಿಂದ ಕಮೀಷನ್ನ್ನು ಪಡೆಯುತ್ತಾರೆ. ಅದರಲ್ಲೊಂದು ಫ್ರೆಂಚ್ ಕಂಪನಿ. ಈ ಕಂಪನಿ ಭಾರತಕ್ಕೆ 20,000 ಕೋಟಿ ಮೌಲ್ಯದ ಜಲಾಂತರ್ಗಾಮಿ ಬಿಡಿಭಾಗಗಳನ್ನು ರಫ್ತು ಮಾಡುತ್ತದೆ”, ಎಂದು ಅವರು ಪ್ರತಿಪಾದಿಸಿದ್ದಾರೆ.
‘ಸೋನಿಯಾ, ರಾಹುಲ್ ಅವರಷ್ಟೇ ಅಲ್ಲ, ಕಾಂಗ್ರೆಸ್ನ ಎಲ್ಲ ನಾಯಕರು ಸಹ ಕಮೀಷನ್ ಏಜೆಂಟ್’ಗಳೆಂದು ಸ್ವಾಮಿ ಟೀಕಿಸಿದ್ದಾರೆ.