ಮನೋರಂಜನೆ

ದೆಹಲಿಯಲ್ಲಿ ನಟ ಅನುಪಮ್ ಖೇರ್ ಪ್ರತಿಭಟನೆ…! ಮಾಡಿದ್ದೂ ಏಕೆ ಗೊತ್ತಾ..? ಇಲ್ಲಿದೆ ನೋಡಿ…

Pinterest LinkedIn Tumblr

ANUPAM KHER

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಪ್ರತಿಭಟನೆ ಮಾಡುತ್ತಿರುವವರ ವಿರುದ್ಧ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಶನಿವಾರ ದೆಹಲಿಯಲ್ಲಿ ಪರ್ಯಾಯ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರುವವರ ವಿರುದ್ಧ ಇಂದು ಬೆಳಗ್ಗೆ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿ ಭವನದವರೆಗೆ ‘ಮಾರ್ಚ್ ಫಾರ್ ಇಂಡಿಯಾ’ ಮೆರವಣಿಗೆ ನಡೆಸುತ್ತಿದ್ದಾರೆ. ಅನುಪಮ್ ಖೇರ್ ಅವರಿಗೆ ಮಧುರ್ ಭಂಡಾರ್ಕರ್ ಸೇರಿದಂತೆ ಬಾಲಿವುಡ್‌ನ ಹಲವು ನಿರ್ದೇಶಕರು ಹಾಗೂ ನಟರು ಸಾಥ್ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅನುಪಮ್ ಖೇರ್, ‘ದೇಶದಲ್ಲಿ ಸಾಕಷ್ಟು ಸಹಿಷ್ಣುತೆ ಇದೆ. ಪ್ರತಿ ದೇಶದಲ್ಲೂ ಒಳ ಸಮಸ್ಯೆಗಳು ಇದ್ದೇ ಇರುತ್ತವೆ. ಹಾಗಂತ ಅದನ್ನು ಅಸಹಿಷ್ಟುತೆಯ ದೇಶ ಎಂದು ಕರೆಯಲು ಬರುವುದಿಲ್ಲ’ ಎಂದಿದ್ದಾರೆ. ಭಾರತ ಅಸಹಿಷ್ಟುತೆಯೆ ದೇಶ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ ಮತ್ತು ಅಸಹಿಷ್ಟುತೆ ಹೋರಾಟಗಾರರು ದೇಶ ವಿರೋಧಿಗಳು ಎಂದು ಬಾಲಿವುಡ್ ನಟ ಹೇಳಿದ್ದಾರೆ.

ಪ್ರತಿಭಟನೆಗೆ ಕರೆ ನೀಡುವುದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅನುಪಮ್ ಖೇರ್, ಕೆಲವು ಸಾಹಿತಿಗಳು ಪ್ರಶಸ್ತಿ ಹಿಂತಿರುಗಿಸುತ್ತಿರುವುದರಿಂದ ಸರ್ಕಾರಕ್ಕೆ ಮುಖಭಂಗವಾಗಿಲ್ಲ. ಬದಲಾಗಿ ಪ್ರಶಸ್ತಿ ನೀಡಿದ್ದ ತೀರ್ಪುಗಾರರಿಗೆ ಮುಖಭಂಗವಾಗಿದೆ ಎಂದು ಹೇಳಿದ್ದರು.

Write A Comment