ದೆಹಲಿ: ಬಿಜೆಪಿಗೆ ಮತ ನೀಡದಿರುವ 70 ಪ್ರತಿಶತ ಭಾರತೀಯರು ಪಾಕಿಸ್ತಾನಿಗಳು ಎಂದು ದೆಹಲಿ ದೆಹಲಿ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ. ಕೆಲ ಬಿಜೆಪಿ ನಾಯಕರ ಹೇಳಿಕೆಗೆ ವ್ಯಂಗ್ಯವಾಗಿ ಮಿಶ್ರಾ ಈ ಹೇಳಿಕೆಯನ್ನು ನೀಡಿದ್ದಾರೆ.
“ಎಸ್ಆರ್ಕೆ ಉಗ್ರ ಹಫೀಜ್ ಸಯೀದ್, ಬಾದಲ್ ಮಂಡೆಲಾ, ಮೋದಿ ಭಾರತದಲ್ಲಿ ಸಂಭವಿಸಿದ ಬಹು ದೊಡ್ಡ ವಿಷಯ ಮತ್ತು ಬಿಜೆಪಿಗೆ ಮತ ನೀಡದ 70% ಜನರು ಪಾಕಿಗಳು”, ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಬಾಲಿವುಡ್ ನಟ ಶಾರುಕ್ ಹೇಳಿದ್ದಕ್ಕೆ ಕಿಡಿಕಾರಿದ್ದ ಕೆಲ ಬಿಜೆಪಿ ನಾಯಕರು ಶಾರುಖ್ ಪಾಕ್ ಏಜೆಂಟ್, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು, ಶಾರುಕ್ ಆತ್ಮ ಪಾಕಿಸ್ತಾನದಲ್ಲಿದೆ. ಅವರು ಭಾರತದಲ್ಲಿ ಬದುಕುತ್ತಿದ್ದಾರಷ್ಟೇ’ ಎಂದೆಲ್ಲ ಹರಿಹಾಯ್ದಿದ್ದರು. ಅಷ್ಟೇ ಅಲ್ಲದೆ ಕೆಲ ದಿನಗಳ ಹಿಂದೆ ಹರಿಯಾಣಾ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಗೋಮಾಂಸ ಸೇವನೆಯನ್ನು ಬಿಟ್ಟರೆ ಮಾತ್ರ ಭಾರತದಲ್ಲಿ ಬದುಕಬಹುದು ಎಂದು ಹೇಳಿದ್ದರು.
ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಪಂಜಾಬ್ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಭಾರತದ ನೆಲ್ಸನ್ ಮಂಡೆಲಾ ಎಂದು ಹೇಳಿದ್ದರು.