ಉನ್ನವೋ: ಶಸ್ತ್ರ ಸರ್ಜಿತ ದುಷ್ಕರ್ಮಿಯೊಬ್ಬ ಕೊರಿಯರ್ ವ್ಯಾನ್ ಚಾಲಕನ ಮೇಲೆ ಗುಂಡು ಹಾರಿಸಿ ಕೋಟ್ಯಾಂತರ ರುಪಾಯಿ ಮೌಲ್ಯದ ಚಿನ್ನವನ್ನು ಲಪಟಾಸಿರುವ ಘಟನೆ ಲಖನೌ-ಕಾನ್ಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಸಿದೆ.
ಸೀಕ್ವೆಲ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದ ಕೊರಿಯರ್ ವಾಹನದಲ್ಲಿ ಕೋಟ್ಯಾಂತರ ಮೊತ್ತದ ಚಿನ್ನವನ್ನು ಅಹಮದಬಾದ್ ನಿಂದ ಲಖನೌಗೆ ಸಾಗಿಸಲಾಗುತ್ತಿತ್ತು. ಬಜೇರಾ ಹಳ್ಳಿ ಬಳಿ ವಾಹನ ಬರುತ್ತಿದ್ದಂತೆ ದುಷ್ಕರ್ಮಿಯೊಬ್ಬ ವಾಹನ ಚಾಲಕ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾನೆ.
ಮೃತ ಚಾಲಕ 30 ವರ್ಷದ ಹರಿಚಂದ್ ಯಾದವ್ ಎಂದು ತಿಳಿದುಬಂದಿದ್ದು, ಭದ್ರತಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ. ವಾಹನದಲ್ಲಿದ್ದ ಮತ್ತೊರ್ವ ಜೀವ ಉಳಿಸಿಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾನೆ.
ಆಗಂತುಕನೊಬ್ಬ ಕೋಟ್ಯಾಂತರ ರುಪಾಯಿ ಮೌತ್ತದ ಚಿನ್ನಾಭರಣ, ಒಂದು ಮೊಬೈಲ್ ಹಾಗೂ ಮೂರು ಎಟಿಎಂ ಕಾರ್ಡ್ ಗಳನ್ನು ಲಪಟಾಯಿಸಿರುವುದಾಗಿ ಪೊಲೀಸರು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ.