ಸ್ಮಾರ್ಟ್ ಫೋನ್ ಬಂದ ಮೇಲೆ ಸೆಲ್ಫಿ ಹುಚ್ಚು ಹೆಚ್ಚಿದ್ದು ಇದರಿಂದ ಆಗುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವ ಆತುರದಲ್ಲಿ ಮೂವರು ಯುವಕರು ಪ್ರಾಣ ಕಳೆದುಕೊಂಡ ಘಟನೆಯೊಂದು ನಡೆದಿದೆ.
ಹೌದು. ಜೈಪುರದ ಬಗ್ರೂ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಸಹೋದರ ಸಂಬಂಧಿಗಳಾದ ದುಷ್ಯಂತ್ ಪರೀಕ್, ವಿಶಾಲ್ ಪರೀಕ್ ಹಾಗೂ ಪಂಕಜ್ ಸಿಂಗ್ ಎಂಬ ಮೂವರು ಮಂಗಳವಾರ ಇಲ್ಲಿನ ನೇವ್ತಾ ಡ್ಯಾಮ್ ವೀಕ್ಷಣೆಗೆಂದು ಸ್ನೇಹಿತರೊಂದಿಗೆ ತೆರಳಿದ್ದರು.
ಈ ಸಮಯದಲ್ಲಿ ಮೂವರು ಒಟ್ಟಿಗೆ ನಿಂತು ಸೆಲ್ಪಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ಆಳವಾದ ನೀರಿನ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.