ರಾಷ್ಟ್ರೀಯ

ರಾಮೇಶ್ವರದಲ್ಲಿ ಕಲಾಂ ಅಂತ್ಯಸಂಸ್ಕಾರ

Pinterest LinkedIn Tumblr

3

ಹೊಸದಿಲ್ಲಿ/ಚೆನ್ನೈ: ಶಿಲಾಂಗ್‌ನಲ್ಲಿ ಸೋಮವಾರ ರಾತ್ರಿ ಕೊನೆಯುಸಿರೆಳೆದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ಅಂತ್ಯಸಂಸ್ಕಾರ ತಮಿಳುನಾಡಿನ ರಾಮೇಶ್ವರದಲ್ಲಿ ಗುರುವಾರ ನೇರವೇರಲಿದೆ.

‘ಕುಟುಂಬ ಸದಸ್ಯರ ಅಪೇಕ್ಷೆ ಮೇರೆಗೆ ಕಲಾಂ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೇರವೇರಿಸಲಾಗುವುದು,’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಸಿತಾಂಶು ಕರ್‌ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಕಲಾಂ ಅವರ ಪಾರ್ಥೀವ ಶರೀರ ಬುಧವಾರ ಮಧ್ಯಾಹ್ನದ ವೇಳೆಗೆ ರಾಮೇಶ್ವರ ತಲುಪುವ ನಿರೀಕ್ಷೆ ಇದೆ.

14

13

12

11

10

8

7

6

5

4

‘ರಾಮೇಶ್ವರದಲ್ಲಿರುವ ಕಲಾಂ ನಿವಾಸದಲ್ಲಿ ಈಗಾಗಲೇ ಅವರ ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಬುಧವಾರ ಸಂಜೆವರೆಗೆ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಗುರುವಾರ ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿಸುವ ಬಗ್ಗೆ ಚಿಂತನೆ ನಡೆದಿದೆ,’ ಎಂದು ಕಲಾಂ ಅವರ ಸೋದರನ ಮೊಮ್ಮಗ ಎ.ಪಿ.ಜೆ.ಎಂ.ಕೆ.ಶೇಖ್‌ ಸಲೀಂ ತಿಳಿಸಿದ್ದಾರೆ.

‘ಕಲಾಂ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ,’ ಎಂದು ರಾಮೇಶ್ವರದ ಅಧಿಕಾರಿಗಳು ತಿಳಿಸಿದ್ದಾರೆ.

Write A Comment