ಮುಂಬಯಿ: ಯೋಧನ ಬಳಿ ಇದ್ದ ಪಿಸ್ತೂಲನ್ನು ಕಸಿದುಕೊಂಡ ಇಬ್ಬರು ಯುವಕರು ಆತನ ಮೇಲೆ ಗುಂಡು ಹಾರಿಸಿ ಕೊಂದ ಘಟನೆ ಉತ್ತರ ಮಹಾರಾಷ್ಟ್ರದಲ್ಲಿ ನಡೆದಿದೆ.
ಜಲಗಾಂವ್ ಜಿಲ್ಲೆಯ ಭೂಸ್ವಾಲ್ನಲ್ಲಿ ಯೋಧ ಶೇಕ್ ಅಕಿಲ್ ಶೈಖ್ ರೆಹಮಾನ್ ಹಾಗೂ ಇಬ್ಬರು ಯುವಕರ ನಡುವೆ ಭಾನುವಾರ ರಾತ್ರಿ ಜಗಳವಾದ ನಂತರ ದುರ್ಘಟನೆ ಸಂಭವಿಸಿದೆ. ಘರ್ಷಣೆ ವೇಳೆ ರೆಹಮಾನ್ ಪಿಸ್ತೂಲ್ ಹೊರ ತೆಗೆದು ಬೆದರಿಕೆ ಒಡ್ಡಿದಾಗ , ಆತನ ಕೈಯಿಂದ ಪಿಸ್ತೂಲ್ ಕಸಿದಕೊಂಡ ಯುವಕರು ಯೋಧನಿಗೆ ಗುಂಡಿಟ್ಟಿದ್ದಾರೆ ಎನ್ನಲಾಗಿದೆ.
‘ಗಂಭೀರವಾಗಿ ಗಾಯಗೊಂಡಿದ್ದ ಯೋಧನನ್ನು ಜಲಗಾಂವ್ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಯೋಧನ ಸಾವನ್ನು ಖಚಿತಪಡಿಸಿದರು. ಘಟನೆ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಲಾಗಿದೆ,’ ಎಂದು ಪೊಲೀಸರು ತಿಳಿಸಿದ್ದಾರೆ.