ರಾಷ್ಟ್ರೀಯ

ವ್ಯಾಪಂ ಹಗರಣ: ಗವರ್ನರ್‌ ಆರೋಪಿ ನಂ.10; ತನಿಖೆಯಿಂದ ಅವರು ಪಾರಾಗುತ್ತಿದ್ದಾರೆಯೇ ?

Pinterest LinkedIn Tumblr

ram

ಭೋಪಾಲ್‌: ವ್ಯಾಪಂ ಹಗರಣದಲ್ಲಿ ದೊಡ್ಡ ತಿಮಿಂಗಲವನ್ನು ತನಿಖೆಯಿಂದ ಪಾರು ಮಾಡಲಾಗಿದೆ ಎನ್ನುವ ಮೂಲಕ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ಹೇಳಿಕೆಗೆ ಪೂರಕವಾಗಿ ಎನ್‌ಡಿಟಿವಿಗೆ ಲಭ್ಯವಾಗಿರುವ ಪೊಲೀಸ್‌ ವರದಿ ಪ್ರಕಾರ, ಕ್ರಿಮಿನಲ್‌ ಪ್ರಕರಣದಲ್ಲಿ ಮಧ್ಯಪ್ರದೇಶದ ರಾಜ್ಯಪಾಲ ರಾಮ್‌ ನರೇಶ್‌ ಯಾದವ್ ಆರೋಪಿ ನಂ.10. ಸಾಂವಿಧಾನಿಕ ವಿನಾಯಿತಿ ಇರುವ ಕಾರಣ ತನಿಖೆಯಿಂದ ಅವರು ಪಾರಾಗಿದ್ದಾರೆ. ಆದರೆ, ಪ್ರಕರಣದ ಇನ್ನಿತರ ಆರೋಪಿಗಳು ಈಗಾಗಲೇ ಜೈಲು ಸೇರಿದ್ದಾರೆ.

‘ಈ ವರದಿಯನ್ನು ಆಧರಿಸಿ, ರಾಜ್ಯಪಾಲರನ್ನು ತನಿಖೆಗೆ ಒಳಪಡಿಸಬೇಕು. ಮುಖ್ಯಮಂತ್ರಿಯನ್ನು ಉಳಿಸಲು ಬಿಜೆಪಿ ಯತ್ನಿಸಿದೆಯೇ ?’ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಪ್ರಶ್ನಿಸಿದ್ದಾರೆ. ಜತೆಗೆ, ಚೌಹಾಣ್‌ ಹಾಗೂ ಅವರ ಪತ್ನಿ ಹಗರಣದ ಭಾಗಿಗಳೆಂದು ಅವರು ಆರೋಪಿಸಿದ್ದಾರೆ.

‘ರಾಜ್ಯಪಾಲರನ್ನು ವಜಾಗೊಳಿಸಬೇಕು. ನಾಟಕ ಬಯಲಾಗುವುದೆಂದು ಬಿಜೆಪಿ ಹೆದರಿದೆ,’ ಎಂದು ಸಾಮಾಜಿಕ ಕಾರ್ಯಕರ್ತ, ನ್ಯಾಯವಾದಿ ಪ್ರಶಾಂತ್‌ ಭೂಷಣ್‌ ಹೇಳಿದ್ದಾರೆ.

ಯಾದವ್ ಅವರನ್ನು ರಾಜ್ಯಪಾಲರ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಗುರುವಾರ ನಡೆಯಲಿದೆ.

ರಾಜ್ಯಪಾಲರು ಹಾಗೂ ಅವರ ಪುತ್ರ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಕಳೆದ ವರ್ಷ ಎಫ್‌ಐಆರ್ ದಾಖಲಾಗಿದೆ ಎಂದು ವ್ಯಾಪಂ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ತಿಳಿಸಿದೆ.

Write A Comment