ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲಿ ಪರಿಹಾರವಿದ್ದು ನಾನು ಹಿಂದೂ ಎಂಬ ಕಾರಣಕ್ಕೆ ಈ ಮಾತನ್ನು ಹೇಳುತ್ತಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.
ಗುಜರಾತ್ ನಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ “ಟ್ರಾನ್ಸೆಂಡೆನ್ಸ್: ಮೈ ಸ್ಪಿರಿಚುವಲ್ ಎಕ್ಸ್ಪೀರಿಯನ್ಸಸ್ ವಿತ್ ಪ್ರಮುಖ್ ಸ್ವಾಮೀಜಿ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಮಿತ್ ಶಾ ನನ್ನ ಬದುಕಿನಲ್ಲಿ ಕಷ್ಟಕಾಲ ಎದುರಾಗಿದ್ದ ಎರಡು ವರ್ಷಗಳ ಅವಧಿಯಲ್ಲಿ ನಾನು ದೇಶದ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಭೇಟಿ ಮಾಡಿದ್ದು ಅದರಲ್ಲಿಯೂ ಭಾರತದಲ್ಲಿರುವ ಎಲ್ಲ ಜ್ಯೋತಿರ್ಲಿಂಗಗಳನ್ನು ದರ್ಶನ ಮಾಡಿದ್ದೇನೆ. ಆದರೆ ಸೊಹರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದಿಂದಾಗಿ ಗುಜರಾತ್ನಲ್ಲಿನ ಸೋಮನಾಥ ದೇವಾಲಯವನ್ನು ಭೇಟಿ ನೀಡಲು ಸಾಧ್ಯವಾಗಿರಲಿಲ್ಲ ಎಂದು ವಿವರಿಸಿದರು.
ಹಿಂದೂ ಧರ್ಮದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದ್ದು ನೆಮ್ಮದಿ ಕಾಣಲು ಸಾಧ್ಯವಿದೆ ಎಂದ ಶಾ ಧಾರ್ಮಿಕ ಗುರುಗಳಾದ ಶಂಕರಾಚಾರ್ಯರು, ನಾರಾಯಣ ಪಂಥದ ಧಾರ್ಮಿಕ ನಾಯಕರಾದ ಪ್ರಮುಖ ಸ್ವಾಮೀ ಹಿಂದೂ ಧರ್ಮದ ಏಳಿಗೆಗೆ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.