ರಾಮ್ಪುರ, ಜೂ.27: ಉತ್ತರ ಪ್ರದೇಶದ ಪೊಲೀಸರು ಆ ರಾಜ್ಯದ ಸಚಿವ ಅಜಂಖಾನ್ರ ಎಮ್ಮೆಗಳ ಕಳುವಿನ ಪ್ರಕರಣ ದಾಖಲಿಸಿ ಹುಡುಕಿದ ಪ್ರಕರಣ ಹಳೆಯದಾಯಿತು. ಇದೀಗ 12 ಕೋಳಿಗಳ ಕಳುವಾಗಿರುವ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡು ಅವುಗಳನ್ನು ಹುಡುಕುತ್ತಿದ್ದಾರೆ. ರಾಮ್ಪುರದ ಪೊಲೀಸರು!
ರಾಮ್ಪುರದ ಕೊತ್ವಾಲಿ ಫರ್ಹಾನ್ ಉಲ್ಲಾಖಾನ್ ಎಂಬುವರಿಗೆ ಸೇರಿದ ಕೋಳಿಗಳು ಕಳೆದ ಮಾರ್ಚ್ 19 ರಂದು ಕಳ್ಳತನವಾಗಿವೆ. ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಹೀಗಾಗಿ ಫರ್ಹಾನ್ ರಾಜ್ಯಪಾಲರ ವೆಬ್ಸೈಟ್ನಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ರಾಜಭವನದ ಅಧಿಕಾರಿಗಳು ಸ್ಥಳೀಯ ಜಿಲ್ಲಾಧಿಕಾರಿಗೆ ದೂರು ದಾಖಲಿಸಿಕೊಳ್ಳಲು ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಾಮ್ಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಕೋಳಿಗಳನ್ನು ಹುಡುಕುತ್ತಿದ್ದಾರೆ. ಕೋಳಿ ಕಳ್ಳರನ್ನು ಬೆನ್ನಟ್ಟಿದ್ದಾರೆ.