ಉಡುಪಿ : ಯುವತಿಯರನ್ನು ಮುಂದಿಟ್ಟುಕೊಂಡು ಮನೆಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯಂತೆ ಗುರುವಾರ ಸಂಜೆ ಮಣಿಪಾಲದ ರಾಯಲ್ ಅಂಬಾಸೆ ಹೊಸ ಕಟ್ಟಡದ ಕೆಳಗಡೆ ಇರುವ ವಾಸದ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಅನೈತಿಕ ವ್ಯವಹಾರ ನಡೆಸುತ್ತಿದ್ದ ವಿವಾಹಿತ ಯುವತಿ ಸಹಿತ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ಜೆಯ ಪ್ರದೀಪ್ ಭಂಡಾರಿ (35), ಉಚ್ಚಿಲ ಪಣಿಯೂರು ಕಟ್ಟಿಂಗೇರಿ ಹೌಸ್ನ ಅಬ್ದುಲ್ ಸಲಾಮ್ (38), ಕೊಡವೂರಿನ ವೆಂಕಟೇಶ ಕಾಮತ್ (39), ಉಚ್ಚಿಲ ಪಡು ನಿವಾಸಿ ಹೇಮಚಂದ್ರ ಎಲ್. ಕರ್ಕೇರ (40) ಮತ್ತು ಪೇತ್ರಿಯ ಶಶಿಕಲಾ ಯಾನೆ ಪ್ರೀತಿ (23) ಬಂಧಿತರು.
ಅನೈತಿಕ ವ್ಯವಹಾರಕ್ಕಾಗಿ ಅವರು ಪಡೆದುಕೊಂಡಿದ್ದ 88,380 ರೂ. ನಗದು, 9 ಮೊಬೈಲ್ ಫೋನ್ ಹಾಗೂ ಅನೈತಿಕ ವ್ಯವಹಾರಕ್ಕಾಗಿ ಮಹಿಳೆಯರನ್ನು ಸಾಗಾಟ ಮಾಡಲು ಉಪಯೋಗಿಸುತ್ತಿದ್ದರು ಎನ್ನಲಾದ ಕಾರು ಮತ್ತು ಬೈಕನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.